ತಿರುವನಂತಪುರ: ತಿರುವನಂತಪುರ: ವಿದ್ಯಾರ್ಥಿಯೊಬ್ಬರ ಸಾವಿನ ಪ್ರಕರಣ ಸಂಬಂಧ ವಯನಾಡಿನ ‘ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ’ದ ಕುಲಪತಿ ಪ್ರೊ. ಎಂ.ಆರ್. ಶಶೀಂದ್ರನ್ ಅವರನ್ನು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಶನಿವಾರ ಅಮಾನತುಗೊಳಿಸಿದ್ದಾರೆ.
ಫೆಬ್ರುವರಿ 18ರಂದು ವಿದ್ಯಾರ್ಥಿ ಸಿದ್ಧಾರ್ಥನ್ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತು ಕುಲಪತಿ ಪ್ರೊ. ಎಂ.ಆರ್. ಶಶೀಂದ್ರನಾಥ್ ಸಲ್ಲಿಸಿದ ವರದಿಯು ಸಮರ್ಪಕವಾಗಿಲ್ಲ. ಜತೆಗೆ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಅಸಡ್ಡೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲ ಆರೀಫ್, ಇದು ಕರ್ತವ್ಯ ಲೋಪಕ್ಕೆ ಸಾಕ್ಷಿ ಎಂದು ತಮ್ಮ ಆದೇಶಪ್ರತಿಯಲ್ಲಿ ಹೇಳಿದ್ದಾರೆ