ನವದೆಹಲಿ (ಪಿಟಿಐ): ‘ಸೋಮವಾರ ಇದೇ 20ರಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಕಿಸಾನ್ ಮಹಾಪಂಚಾಯತ್ ಸಮಾವೇಶದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ರೈತರು ಆಗಮಿಸುತ್ತಿದ್ದಾರೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಭಾನುವಾರ ತಿಳಿಸಿದೆ.
‘ಈ ಸಮಾವೇಶದಲ್ಲಿ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಾತ್ಮಕ ಖಾತರಿ ನೀಡಲು ಒತ್ತಾಯಿಸಲಾಗುವುದು’ ಎಂದು ಎಸ್ಕೆಎಂ ಪ್ರಕಟಣೆ ಹೇಳಿದೆ.