‘ಕಳೆದ ರಾತ್ರಿ ಗೂಡ್ಸ್ ರೈಲಿನಿಂದ ಎಲ್ಪಿಜಿಯನ್ನು ಅನ್ಲೋಡ್ ಮಾಡಲು ನಿಲ್ಲಿಸಿದಾಗ ಹಳಿತಪ್ಪಿದೆ. ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ಇದರಿಂದ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಸೂರ್ಯೋದಯದ ನಂತರ ಹಳಿ ತಪ್ಪಿದ ರೈಲಿನ ಕಾರ್ಯಾಚರಣೆ ಕಾರ್ಯ ಪ್ರಾರಂಭವಾಯಿತು’ಎಂದು ಸಿಆರ್ಪಿಒ ತಿಳಿಸಿದ್ದಾರೆ.
ಜೂನ್ 2ರಂದು ಒಡಿಶಾದ ಬಾಲೇಶ್ವರದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 275ಕ್ಕೂ ಅಧಿಕ ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.