ಹಿಂದೆ, ಮಹಾರಾಷ್ಟ್ರದಲ್ಲಿಶಿವಸೇನಾ– ಬಿಜೆಪಿ ಆಡಳಿತವಿದ್ದಾಗ ರಿಯಾಯಿತಿ ದರದಲ್ಲಿ ಝುಣಕಾ ಭಾಕರ್ (ಪಲ್ಯ– ರೊಟ್ಟಿ) ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಕ್ರಮೇಣ ಆ ಕೇಂದ್ರಗಳು ಮುಚ್ಚಿದ್ದವು. ಇಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಇದನ್ನು ಪ್ರಸ್ತಾಪಿಸಿದ ಪವಾರ್, ‘ಝುಣಕಾ ಭಾಕರ್ ಕೇಂದ್ರಗಳು ಯಾವಾಗ ಮುಚ್ಚಿದವು ಎಂಬುದು ತಿಳಿಯಲೇ ಇಲ್ಲ. ಅವುಗಳಿಗೆ ನೀಡಲಾಗಿದ್ದ ಜಾಗವನ್ನು ಶಿವಸೇನಾದವರು ಒತ್ತುವರಿ ಮಾಡಿಕೊಂಡರು. ಈಗ ₹ 10ಕ್ಕೆ ಊಟ ಕೊಡುವ ಯೋಜನೆಯನ್ನು ಘೋಷಿಸಲಾಗಿದೆ. ಜನರು ಆಡಳಿತ ನಡೆಸಲು ನಿಮ್ಮನ್ನು ಆಯ್ಕೆ ಮಾಡಬೇಕೋ ಅಥವಾ ಅಡುಗೆ ಮಾಡುವುದಕ್ಕೋ’ ಎಂದು ಪ್ರಶ್ನಿಸಿದರು.