<p><strong>ಮುಂಬೈ:</strong> 10 ನಗರ ಪಾಲಿಕೆಗಳ ಚುನಾವಣೆಯಲ್ಲಿ 65 ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆಲುವು ಸಾಧಿಸಿದ್ದಾರೆ ಎಂದು ಮಹಾರಾಷ್ಟ್ರದ ಚುನಾವಣಾ ಆಯೋಗ (ಎಸ್ಇಸಿ) ಶುಕ್ರವಾರ ತಿಳಿಸಿದೆ. </p><p>ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಜ.15ರಂದು ಚುನಾವಣೆ ನಡೆದಿತ್ತು. ಇಂದು(ಜ.16) ಮತ ಎಣಿಕೆ ನಡೆಯುತ್ತಿದೆ.</p><p>ಎದುರಾಳಿಯೇ ಇಲ್ಲದೇ ಚುನಾವಣೆ ಗೆದ್ದ 65 ಜನರಲ್ಲಿ 43 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಏಕನಾಥ ಶಿಂಧೆ ನೇತೃತ್ವದ ಶಿವಸೇನಾದ 18 ಅಭ್ಯರ್ಥಿಗಳು, ಕಾಂಗ್ರೆಸ್ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಬ್ಬರು ಕೂಡ ಎದುರಾಳಿ ಇಲ್ಲದೇ ಗೆಲುವು ಸಾಧಿಸಿದ್ದಾರೆ. </p>.BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ.<p>ಠಾಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆದಿದ್ದಾರೆ. 22 ಅಭ್ಯರ್ಥಿಗಳಲ್ಲಿ 16 ಜನ ಬಿಜೆಪಿ ಹಾಗೂ 6 ಮಂದಿ ಶಿವಸೇನಾದಿಂದ ಕಣಕ್ಕಿಳಿದಿದ್ದರು. </p><p>ಪನ್ವೆಲ್, ಜಲಗಾಂವ್, ಅಹಲ್ಯಾನಗರ ಹಾಗೂ ಧುಲೆ ಕ್ಷೇತ್ರಗಳಲ್ಲಿ ಕೂಡ ಎದುರಾಳಿಗಳೇ ಇಲ್ಲದೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. </p><p>ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಹೆಚ್ಚಿನ ಅಭ್ಯರ್ಥಿಗಳು ಎದುರಾಳಿ ಇಲ್ಲದೇ ಗೆಲುವು ಸಾಧಿಸಿರುವ ಕುರಿತು ನಗರಸಭೆ ಆಯುಕ್ತರಿಂದ ವರದಿ ಕೇಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಹೇಳಿದ್ದಾರೆ. </p><p>ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. </p>.ಇನ್ಮುಂದೆ ಕರ್ನಾಟಕದ ಶಾಯಿ ಬಳಕೆ: 'ಮಹಾ' ವಿವಾದದ ಬಳಿಕ ಎಚ್ಚೆತ್ತ ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> 10 ನಗರ ಪಾಲಿಕೆಗಳ ಚುನಾವಣೆಯಲ್ಲಿ 65 ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆಲುವು ಸಾಧಿಸಿದ್ದಾರೆ ಎಂದು ಮಹಾರಾಷ್ಟ್ರದ ಚುನಾವಣಾ ಆಯೋಗ (ಎಸ್ಇಸಿ) ಶುಕ್ರವಾರ ತಿಳಿಸಿದೆ. </p><p>ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಜ.15ರಂದು ಚುನಾವಣೆ ನಡೆದಿತ್ತು. ಇಂದು(ಜ.16) ಮತ ಎಣಿಕೆ ನಡೆಯುತ್ತಿದೆ.</p><p>ಎದುರಾಳಿಯೇ ಇಲ್ಲದೇ ಚುನಾವಣೆ ಗೆದ್ದ 65 ಜನರಲ್ಲಿ 43 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಏಕನಾಥ ಶಿಂಧೆ ನೇತೃತ್ವದ ಶಿವಸೇನಾದ 18 ಅಭ್ಯರ್ಥಿಗಳು, ಕಾಂಗ್ರೆಸ್ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಬ್ಬರು ಕೂಡ ಎದುರಾಳಿ ಇಲ್ಲದೇ ಗೆಲುವು ಸಾಧಿಸಿದ್ದಾರೆ. </p>.BMC Results: ಅಧಿಕಾರದತ್ತ ಬಿಜೆಪಿ ನೇತೃತ್ವದ ಮಹಾಯುತಿ; ಉದ್ಧವ್ ಬಣಕ್ಕೆ ಹಿನ್ನಡೆ.<p>ಠಾಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆದಿದ್ದಾರೆ. 22 ಅಭ್ಯರ್ಥಿಗಳಲ್ಲಿ 16 ಜನ ಬಿಜೆಪಿ ಹಾಗೂ 6 ಮಂದಿ ಶಿವಸೇನಾದಿಂದ ಕಣಕ್ಕಿಳಿದಿದ್ದರು. </p><p>ಪನ್ವೆಲ್, ಜಲಗಾಂವ್, ಅಹಲ್ಯಾನಗರ ಹಾಗೂ ಧುಲೆ ಕ್ಷೇತ್ರಗಳಲ್ಲಿ ಕೂಡ ಎದುರಾಳಿಗಳೇ ಇಲ್ಲದೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. </p><p>ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಹೆಚ್ಚಿನ ಅಭ್ಯರ್ಥಿಗಳು ಎದುರಾಳಿ ಇಲ್ಲದೇ ಗೆಲುವು ಸಾಧಿಸಿರುವ ಕುರಿತು ನಗರಸಭೆ ಆಯುಕ್ತರಿಂದ ವರದಿ ಕೇಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಹೇಳಿದ್ದಾರೆ. </p><p>ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. </p>.ಇನ್ಮುಂದೆ ಕರ್ನಾಟಕದ ಶಾಯಿ ಬಳಕೆ: 'ಮಹಾ' ವಿವಾದದ ಬಳಿಕ ಎಚ್ಚೆತ್ತ ಚುನಾವಣಾ ಆಯೋಗ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>