ಕೋಯಿಕ್ಕೋಡ್: ಶತಮಾನದ ದುರಂತ ಕಂಡ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರು ಬೋಟನ್ನೇರಲು ನೆರವಾಗಲು ಯುವಕನೊಬ್ಬ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಂತೆಯೇ, ಯುವಕನ ನಡೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದ್ದ ವಿಚಾರ ಎಲ್ಲರಿಗೂ ತಿಳಿದಿರುವುದೇ. ಇದೀಗ ಆ ಯುವಕನಿಗೆ ಕಾರು ತಯಾರಿಕಾ ಕಂಪೆನಿ ಮಹಿಂದ್ರದಿಂದ ಅಚ್ಚರಿಯ ಉಡುಗೊರೆಯೊಂದು ದೊರೆತಿದೆ.