ನವೆಂಬರ್ 22ರಿಂದ 27ರ ಅವಧಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದವರ ಕಣ್ಣಿಗೆ ತೀವ್ರವಾದ ಸೋಂಕು ತಗುಲಿದೆ. ಈವರೆಗೆ ಪುಜಪ್ಫರ್ಪುರ ಮತ್ತು ಪಟ್ನಾದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 12 ಮಂದಿ ಸೋಂಕಿತರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಇನ್ನುಳಿದ 53 ಮಂದಿಗೂ ಒಂದು ಕಣ್ಣನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬೇಕಾದ ಪರಿಸ್ಥಿತಿ ಬಂದೊದಗಿದೆ.