ಲಖನೌದ ಮಲಿಹಾಬಾದ್ ಮತ್ತು ಕಾನ್ಪುರದ ಬಬುಪೂರ್ವದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಅಂತಹ ಕ್ಷಿಪಣಿಗಳನ್ನು ಲಖನೌದಲ್ಲಿ ತಯಾರಿಸಲಾಗುತ್ತದೆ. ಅವುಗಳು 400–600 ಕಿ.ಮೀ ದೂರದಲ್ಲಿ ಶತ್ರುಗಳನ್ನು ಹೊಡೆದುರುಳಿಸಲಿವೆ ಎಂದು ಹೇಳಿದರು.
ಮಲಿಹಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೈ ದೇವಿ ಮತ್ತು ಅವರ ಪತಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರನ್ನು ಹೊಗಳಿದ ರಾಜನಾಥ್ ಸಿಂಗ್, ಲಖನೌದಲ್ಲಿ ದೊಡ್ಡ ಗನ್ಗಳ ತಯಾರಿಕೆ ಆಗಲಿದೆ ಎಂದಿದ್ದಾರೆ.