<p class="title"><strong>ಗೋರಖಪುರ (ಉತ್ತರಪ್ರದೇಶ):</strong>ರೈತರ ಖಾತೆಗಳಿಗೆ ನೇರವಾಗಿ ಹಣ ನೆರವಿನ ಹಣ ವರ್ಗಾವಣೆ ಮಾಡುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಚಾಲನೆ ನೀಡಿದರು.</p>.<p class="title">ರೈತರಿಗೆ ವಾರ್ಷಿಕ ₹ 6,000 ಹಣವನ್ನು ನೇರವಾಗಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿತ್ತು. ಆ ಹಣದ ಮೊದಲ ಕಂತನ್ನು ಈಗ ಸರ್ಕಾರವು ಆಯ್ದ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ.</p>.<p class="title">ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿ, ಯೋಜನೆಯನ್ನು ಮೋದಿ ಉದ್ಘಾಟಿಸಿದರು.</p>.<p class="title">‘ಹಿಂದಿನ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. 2014ರಲ್ಲಿ ನೀವು ಬಿಜೆಪಿಯನ್ನು ಆಯ್ಕೆ ಮಾಡಿ, ಈ ಪರಿಸ್ಥಿತಿಯನ್ನು ಬದಲಾಯಿಸಲು ಅವಕಾಶ ನೀಡಿದ್ದೀರಿ. ಈಗ ಮೊದಲ ಕಂತಿನ ಹಣವನ್ನು ಜಮೆ ಮಾಡಿದ್ದೇವೆ. ಉಳಿದ ರೈತರಿಗೂ ಕೆಲವೇ ದಿನಗಳಲ್ಲಿ ಹಣ ಸಿಗಲಿದೆ’ ಎಂದು ಮೋದಿ ಘೋಷಿಸಿದರು.</p>.<p>‘ಕೆಲವು ಪಕ್ಷಗಳು ಹತ್ತು ವರ್ಷಕ್ಕೊಮ್ಮೆ ಮಾತ್ರ ರೈತರನ್ನು ನೆನಪಿಸಿಕೊಳ್ಳುತ್ತವೆ. ಆಗ ಅವರು ಸಾಲಮನ್ನಾ ಎಂಬ ತುಂಡು ಮಿಠಾಯಿಯನ್ನು ರೈತರಿಗೆ ಹಂಚಿ ಮತ ಪಡೆಯುತ್ತಾರೆ. ಆದರೆ ಈ ಭಾರಿ ಮೋದಿ ಅವರ ಬಣ್ಣ ಬದಲಾಯಿಸುತ್ತಾನೆ ಎಂಬುದು ಅವರಿಗೆ ಗೊತ್ತಿರಲಿಲ್ಲ’ ಎಂದು ಮೋದಿ ಲೇವಡಿ ಮಾಡಿದರು.</p>.<p>‘ಸಾಲಮನ್ನಾ ಎಂಬುದು ನಮಗೂ ಸುಲಭದ ಕೆಲಸ. ರಾಜಕೀಯ ಲಾಭಕ್ಕಾಗಿ ಈ ತುಂಡು ಮಿಠಾಯಿಯನ್ನು ನಾವೂ ರೈತರಿಗೆ ಹಂಚಬಹುದಿತ್ತು. ಆದರೆ ನಾವು ಅಂತಹ ಪಾಪದ ಕೆಲಸ ಮಾಡುವುದಿಲ್ಲ. ಸಾಲಮನ್ನಾದಿಂದ ಕೆಲವೇ ಮಂದಿಗಷ್ಟೇ ಲಾಭವಾಗುತ್ತದೆ’ ಎಂದು ಅವರು ಹೇಳಿದರು.</p>.<p><strong>‘ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗಿಲ್ಲ’</strong><br />‘ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಕೇಳುತ್ತಿದ್ದಾರೆ. ಆದರೆಕೇಂದ್ರ ಸರ್ಕಾರವು ರೈತರಿಗೆ ದಿನಕ್ಕೆ ₹ 17 ಕೊಡಲು ಮುಂದಾಗಿದೆ. ಈ ಯೋಜನೆಯಂತೆ ರೈತರಿಗೆ ಪ್ರತಿ ತಿಂಗಳು ₹ 500 ಸಿಗಲಿದೆ.ರೈತರ ಸಮಸ್ಯೆಯ ಗಂಭೀರತೆ ಸರ್ಕಾರಕ್ಕೆ ಅರ್ಥವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದುಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.</p>.<p>**<br />ರೈತರಿಗೆ ಬಿಡುಗಡೆಯಾದ ₹ 100ರಲ್ಲಿ ₹ 85 ದಲ್ಲಾಳಿಗಳೇ ಕಬಳಿಸುತ್ತಿದ್ದ ಕಾಲ ಯಾವತ್ತೋ ಹೋಯಿತು. ನಮ್ಮ ಸರ್ಕಾರ ನೇರವಾಗಿ ರೈತರಿಗೆ ಹಣ ನೀಡುತ್ತಿದೆ. ದಲ್ಲಾಳಿಗಳಿಗೆ ಇಲ್ಲಿ ಜಾಗವೇ ಇಲ್ಲ.<br /><em><strong>-ನರೇಂದ್ರ ಮೋದಿ, ಪ್ರಧಾನಿ</strong></em></p>.<p>**</p>.<p>ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಅದರಲ್ಲಿ ಇದೊಂದು ಐತಿಹಾಸಿಕ ಕ್ರಮ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಇದರಿಂದ ನೆರವಾಗಲಿದೆ.<br /><em><strong>-ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ</strong></em></p>.<p>**</p>.<p>ಇದೊಂದು ಅಪ್ರಬುದ್ಧ ಕ್ರಮ. ರೈತರ ಸಮಸ್ಯೆಗಳನ್ನು ಈ ಸರ್ಕಾರವು ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ.<br /><em><strong>-ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ</strong></em></p>.<p>**</p>.<p>ಇದು ‘ವೋಟಿಗಾಗಿ ಹಣ’ ಯೋಜನೆ. ಮತಕ್ಕಾಗಿ ಸರ್ಕಾರವು ಅಧಿಕೃತವಾಗಿ ರೈತ ಕುಟುಂಬಗಳಿಗೆ ಲಂಚ ನೀಡುತ್ತಿದೆ. ಕಷ್ಟಪಡುವ ರೈತನಿಗೂ ಹಣ ಹೋಗಲಿದೆ, ಜಮೀನ್ದಾರನಿಗೂ ಈ ಹಣ ಹೋಗಲಿದೆ<br /><em><strong>-ಪಿ.ಚಿದಂಬರಂ, ಕಾಂಗ್ರೆಸ್ ನಾಯಕ</strong></em></p>.<p>**</p>.<p>ಇಂತಹ ಕಲ್ಯಾಣ ಕಾರ್ಯಕ್ರಮ ಜಾರಿಗೆ ದಿನಾಂಕ ನಿಗದಿ ಮಾಡಿರಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರವು ರೈತರನ್ನು ನೆನಪಿಸಿಕೊಂಡಿದೆ ಎಂಬುದು ಸುಳ್ಳು. ಈ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು<br /><em><strong>-ವೀರೇಂದ್ರ ಸಿಂಗ್ ಮಸ್ತ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ</strong></em></p>.<p><b>ಅಂಕಿ–ಅಂಶಗಳು</b><br />₹ 2,000 –ಪ್ರತಿ ರೈತರಿಗೆ ಮೊದಲ ಕಂತಿನಲ್ಲಿ ನೀಡಿದ ಹಣ<br />1.01 ಕೋಟಿ –ಮೊದಲ ಹಂತದಲ್ಲಿ ನೆರವಿನ ಹಣ ಪಡೆದ ರೈತರ ಸಂಖ್ಯೆ<br />₹ 75,000 ಕೋಟಿ –ಯೋಜನೆಯ ಒಟ್ಟು ಮೊತ್ತ<br />12 ಕೋಟಿ– ಯೋಜನೆಯ ಒಟ್ಟು ಫಲಾನುಭವಿ ರೈತರು<br />₹ 6,000– ಪ್ರತಿ ರೈತರಿಗೆ ಯೋಜನೆ ಅಡಿ ದೊರೆಯಲಿರುವ ಹಣ (ವಾರ್ಷಿಕ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಗೋರಖಪುರ (ಉತ್ತರಪ್ರದೇಶ):</strong>ರೈತರ ಖಾತೆಗಳಿಗೆ ನೇರವಾಗಿ ಹಣ ನೆರವಿನ ಹಣ ವರ್ಗಾವಣೆ ಮಾಡುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಚಾಲನೆ ನೀಡಿದರು.</p>.<p class="title">ರೈತರಿಗೆ ವಾರ್ಷಿಕ ₹ 6,000 ಹಣವನ್ನು ನೇರವಾಗಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಘೋಷಿಸಿತ್ತು. ಆ ಹಣದ ಮೊದಲ ಕಂತನ್ನು ಈಗ ಸರ್ಕಾರವು ಆಯ್ದ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ.</p>.<p class="title">ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿ, ಯೋಜನೆಯನ್ನು ಮೋದಿ ಉದ್ಘಾಟಿಸಿದರು.</p>.<p class="title">‘ಹಿಂದಿನ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಸಂದರ್ಭದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. 2014ರಲ್ಲಿ ನೀವು ಬಿಜೆಪಿಯನ್ನು ಆಯ್ಕೆ ಮಾಡಿ, ಈ ಪರಿಸ್ಥಿತಿಯನ್ನು ಬದಲಾಯಿಸಲು ಅವಕಾಶ ನೀಡಿದ್ದೀರಿ. ಈಗ ಮೊದಲ ಕಂತಿನ ಹಣವನ್ನು ಜಮೆ ಮಾಡಿದ್ದೇವೆ. ಉಳಿದ ರೈತರಿಗೂ ಕೆಲವೇ ದಿನಗಳಲ್ಲಿ ಹಣ ಸಿಗಲಿದೆ’ ಎಂದು ಮೋದಿ ಘೋಷಿಸಿದರು.</p>.<p>‘ಕೆಲವು ಪಕ್ಷಗಳು ಹತ್ತು ವರ್ಷಕ್ಕೊಮ್ಮೆ ಮಾತ್ರ ರೈತರನ್ನು ನೆನಪಿಸಿಕೊಳ್ಳುತ್ತವೆ. ಆಗ ಅವರು ಸಾಲಮನ್ನಾ ಎಂಬ ತುಂಡು ಮಿಠಾಯಿಯನ್ನು ರೈತರಿಗೆ ಹಂಚಿ ಮತ ಪಡೆಯುತ್ತಾರೆ. ಆದರೆ ಈ ಭಾರಿ ಮೋದಿ ಅವರ ಬಣ್ಣ ಬದಲಾಯಿಸುತ್ತಾನೆ ಎಂಬುದು ಅವರಿಗೆ ಗೊತ್ತಿರಲಿಲ್ಲ’ ಎಂದು ಮೋದಿ ಲೇವಡಿ ಮಾಡಿದರು.</p>.<p>‘ಸಾಲಮನ್ನಾ ಎಂಬುದು ನಮಗೂ ಸುಲಭದ ಕೆಲಸ. ರಾಜಕೀಯ ಲಾಭಕ್ಕಾಗಿ ಈ ತುಂಡು ಮಿಠಾಯಿಯನ್ನು ನಾವೂ ರೈತರಿಗೆ ಹಂಚಬಹುದಿತ್ತು. ಆದರೆ ನಾವು ಅಂತಹ ಪಾಪದ ಕೆಲಸ ಮಾಡುವುದಿಲ್ಲ. ಸಾಲಮನ್ನಾದಿಂದ ಕೆಲವೇ ಮಂದಿಗಷ್ಟೇ ಲಾಭವಾಗುತ್ತದೆ’ ಎಂದು ಅವರು ಹೇಳಿದರು.</p>.<p><strong>‘ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗಿಲ್ಲ’</strong><br />‘ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಕೇಳುತ್ತಿದ್ದಾರೆ. ಆದರೆಕೇಂದ್ರ ಸರ್ಕಾರವು ರೈತರಿಗೆ ದಿನಕ್ಕೆ ₹ 17 ಕೊಡಲು ಮುಂದಾಗಿದೆ. ಈ ಯೋಜನೆಯಂತೆ ರೈತರಿಗೆ ಪ್ರತಿ ತಿಂಗಳು ₹ 500 ಸಿಗಲಿದೆ.ರೈತರ ಸಮಸ್ಯೆಯ ಗಂಭೀರತೆ ಸರ್ಕಾರಕ್ಕೆ ಅರ್ಥವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದುಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.</p>.<p>**<br />ರೈತರಿಗೆ ಬಿಡುಗಡೆಯಾದ ₹ 100ರಲ್ಲಿ ₹ 85 ದಲ್ಲಾಳಿಗಳೇ ಕಬಳಿಸುತ್ತಿದ್ದ ಕಾಲ ಯಾವತ್ತೋ ಹೋಯಿತು. ನಮ್ಮ ಸರ್ಕಾರ ನೇರವಾಗಿ ರೈತರಿಗೆ ಹಣ ನೀಡುತ್ತಿದೆ. ದಲ್ಲಾಳಿಗಳಿಗೆ ಇಲ್ಲಿ ಜಾಗವೇ ಇಲ್ಲ.<br /><em><strong>-ನರೇಂದ್ರ ಮೋದಿ, ಪ್ರಧಾನಿ</strong></em></p>.<p>**</p>.<p>ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಅದರಲ್ಲಿ ಇದೊಂದು ಐತಿಹಾಸಿಕ ಕ್ರಮ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಇದರಿಂದ ನೆರವಾಗಲಿದೆ.<br /><em><strong>-ಮುಕ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ</strong></em></p>.<p>**</p>.<p>ಇದೊಂದು ಅಪ್ರಬುದ್ಧ ಕ್ರಮ. ರೈತರ ಸಮಸ್ಯೆಗಳನ್ನು ಈ ಸರ್ಕಾರವು ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ.<br /><em><strong>-ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ</strong></em></p>.<p>**</p>.<p>ಇದು ‘ವೋಟಿಗಾಗಿ ಹಣ’ ಯೋಜನೆ. ಮತಕ್ಕಾಗಿ ಸರ್ಕಾರವು ಅಧಿಕೃತವಾಗಿ ರೈತ ಕುಟುಂಬಗಳಿಗೆ ಲಂಚ ನೀಡುತ್ತಿದೆ. ಕಷ್ಟಪಡುವ ರೈತನಿಗೂ ಹಣ ಹೋಗಲಿದೆ, ಜಮೀನ್ದಾರನಿಗೂ ಈ ಹಣ ಹೋಗಲಿದೆ<br /><em><strong>-ಪಿ.ಚಿದಂಬರಂ, ಕಾಂಗ್ರೆಸ್ ನಾಯಕ</strong></em></p>.<p>**</p>.<p>ಇಂತಹ ಕಲ್ಯಾಣ ಕಾರ್ಯಕ್ರಮ ಜಾರಿಗೆ ದಿನಾಂಕ ನಿಗದಿ ಮಾಡಿರಲಿಲ್ಲ. ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರವು ರೈತರನ್ನು ನೆನಪಿಸಿಕೊಂಡಿದೆ ಎಂಬುದು ಸುಳ್ಳು. ಈ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು<br /><em><strong>-ವೀರೇಂದ್ರ ಸಿಂಗ್ ಮಸ್ತ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ</strong></em></p>.<p><b>ಅಂಕಿ–ಅಂಶಗಳು</b><br />₹ 2,000 –ಪ್ರತಿ ರೈತರಿಗೆ ಮೊದಲ ಕಂತಿನಲ್ಲಿ ನೀಡಿದ ಹಣ<br />1.01 ಕೋಟಿ –ಮೊದಲ ಹಂತದಲ್ಲಿ ನೆರವಿನ ಹಣ ಪಡೆದ ರೈತರ ಸಂಖ್ಯೆ<br />₹ 75,000 ಕೋಟಿ –ಯೋಜನೆಯ ಒಟ್ಟು ಮೊತ್ತ<br />12 ಕೋಟಿ– ಯೋಜನೆಯ ಒಟ್ಟು ಫಲಾನುಭವಿ ರೈತರು<br />₹ 6,000– ಪ್ರತಿ ರೈತರಿಗೆ ಯೋಜನೆ ಅಡಿ ದೊರೆಯಲಿರುವ ಹಣ (ವಾರ್ಷಿಕ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>