ಭೋಪಾಲ್: ‘ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸಪ್ತರ್ಷಿಗಳ ವಿಗ್ರಹಗಳು ಕುಸಿದುಬಿದ್ದ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ಗೆ ಕಾಂಗ್ರೆಸ್ ಮೊರೆಹೋಗಲಿದೆ’ ಎಂದು ಪಕ್ಷದ ನಾಯಕರೊಬ್ಬರು ಭಾನುವಾರ ತಿಳಿಸಿದರು.
ಮೇ 28ರಂದು ಬಿರುಗಾಳಿಯಿಂದಾಗಿ ಮಹಾಕಾಲ್ ಲೋಕ್ ಕಾರಿಡಾರ್ನಲ್ಲಿದ್ದ ಏಳು ಋಷಿಗಳ ವಿಗ್ರಹಗಳ ಪೈಕಿ ಆರು ವಿಗ್ರಹಗಳು ಕುಸಿದುಬಿದ್ದಿದ್ದವು.
‘ನಾವು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧವಾಗಿದ್ದೇವೆ. ಅರ್ಜಿಯನ್ನು ಹಿರಿಯ ವಕೀಲರಿಗೂ ಕಳುಹಿಸಿದ್ದೇವೆ. ಬಹುಶಃ ಈ ವಾರದಲ್ಲಿ ಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಅವರು ಹೇಳಿದರು.