ಕಮಲ್ ನಾಥ್ ಅವರು ‘ಎಕ್ಸ್’ನಲ್ಲಿ ಘೋಷಿಸಿರುವ ಪ್ರಮುಖ ಭರವಸೆಗಳಲ್ಲಿ, ಶ್ರೀರಾಮ ವನ ಗಮನ ಪಥದ ಅಭಿವೃದ್ಧಿ (ಕಾಡಿನಲ್ಲಿ ವನವಾಸದ ವೇಳೆ ರಾಮ ಸಾಗಿದ ಎನ್ನಲಾದ ಮಾರ್ಗ), ಭಗವಾನ್ ಪರಶುರಾಮನ ಜನ್ಮಸ್ಥಳ ಜನಪವ್ ಅನ್ನು ಪವಿತ್ರ ಯಾತ್ರಾ ಸ್ಥಳವೆಂದು ಘೋಷಿಸುವುದು ಹಾಗೂ ಮೊರೆನಾದಲ್ಲಿ ರವಿದಾಸ್ ಪೀಠ, ರೇವಾದಲ್ಲಿ ಸಂತ ಕಬೀರ್ ಪೀಠ ಸ್ಥಾಪನೆ ಸೇರಿವೆ.