ರೈಲು ಡಿಕ್ಕಿ ಹೊಡೆದ ರಭಸಕ್ಕೆ ಒಂಟೆಯು ಚೂರು-ಚೂರಾಗಿದ್ದು, ಅದರ ದೇಹದ ಭಾಗಗಳು ರೈಲಿನ ಎಂಜಿನ್ನಲ್ಲಿ ಸಿಲುಕಿಕೊಂಡಿದ್ದರಿಂದಲೇ ರೈಲು ಸ್ಥಗಿತಗೊಳ್ಳುವಂತಾಯಿತು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ಎಂಜಿನ್ನಲ್ಲಿ ಸಿಲುಕಿದ್ದ ಒಂಟೆಯ ಭಾಗಗಳನ್ನು ತೆರವುಗೊಳಿಸಿದ ಬಳಿಕ ರೈಲು ಅಲ್ಲಿಂದ ತೆರಳಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.