ಸೋಂಕು ನಿವಾರಕ ಸಿಂಪಡಣೆ: ಅಪರಾಧ ನಡೆದಿರುವ ಸ್ಥಳ ರೆಡ್ ಝೋನ್ ಎನ್ನುವುದನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದರು. ಹತ್ಯೆ ನಡೆದ ಮನೆ ಇರುವ ಪ್ರದೇಶದಲ್ಲಿ ಸಾಕಷ್ಟು ಮನೆಗಳು ಒತ್ತೊತ್ತಾಗಿವೆ. ಆದ್ದರಿಂದ ದೆಹಲಿ ಜಲಮಂಡಳಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ ಬಳಿಕವಷ್ಟೆ, ಪಿಪಿಇ ಧರಿಸಿದ ಪೊಲೀಸರು ಅಪರಾಧ ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸಿದರು.