ಈ ವಿಚಾರದಲ್ಲಿ ಕೇರಳದ ನಿಲುವು ದೃಢವಾಗಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ. ‘ಎನ್ಸಿಇಆರ್ಟಿ ಈ ಹಿಂದೆಯೂ ಇಂಥದ್ದೇ ಯತ್ನ ನಡೆಸಿತ್ತು. ಇತಿಹಾಸ, ಸಮಾಜ ವಿಜ್ಞಾನ ಮತ್ತು ರಾಜ್ಯಶಾಸ್ತ್ರದ ಪಠ್ಯಪುಸ್ತಕಗಳಿಂದ ಕೆಲವು ಅಂಶಗಳನ್ನು ಕೈಬಿಟ್ಟಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರವು, ಕೈಬಿಟ್ಟ ಅಂಶಗಳನ್ನು ಒಳಗೊಂಡ ಹೆಚ್ಚುವರಿ ಪಠ್ಯಪುಸ್ತಕವನ್ನು ಆಗ ಮುದ್ರಿಸಿತ್ತು’ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.