ಎಲ್ಲ ಸಾಧಕರಿಗೂ ಶುಭಕೋರುತ್ತಾ, ಹಸ್ತಲಾಘವ ನೀಡುತ್ತ ಬಂದ ಪ್ರಧಾನಿ ಮೋದಿ, ಖಾದ್ರಿ ಅವರ ಬಳಿಗೂ ಬಂದರು. ಆಗ ಪ್ರಧಾನಿಯವರ ಕೈಗಳನ್ನು ಎರಡೂ ಕೈಗಳಿಂದ ಹಿಡಿದುಕೊಂಡ ಖಾದ್ರಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಪದ್ಮ ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆ. ಆದರೆ ನನಗೆ ಅದು ಸಿಗಲಿಲ್ಲ. ನಿಮ್ಮ ಸರ್ಕಾರ ಬಂದಾಗ, ಬಿಜೆಪಿ ಸರ್ಕಾರ ನನಗೆ ಯಾವುದೇ ಪ್ರಶಸ್ತಿ ನೀಡುವುದಿಲ್ಲ ಎಂದು ಭಾವಿಸಿದ್ದೆ. ಆದರೆ ನೀವು ನನ್ನ ನಂಬಿಕೆ ತಪ್ಪು ಎಂದು ಸಾಬೀತುಪಡಿಸಿದ್ದೀರಿ. ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುವೆ’ ಎಂದು ಖಾದ್ರಿ ಹೇಳಿದರು.