<p><strong>ನವದೆಹಲಿ</strong>: ನ್ಯೂಸ್ಕ್ಲಿಕ್ ಪ್ರಕರಣದಲ್ಲಿ ಸುದ್ದಿ ಪೋರ್ಟಲ್ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ ಎಚ್.ಆರ್. ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಕೋರ್ಟ್ 10 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>.<p>ಚೀನಾ ಪರ ಪ್ರಚಾರ ನಡೆಸಲು ಸುದ್ದಿ ಪೋರ್ಟಲ್ ಹಣ ಪಡೆದಿದೆ ಎಂಬ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಬಂಧಿಸಿದ್ದು, ಮಂಗಳವಾರ ಕೋರ್ಟ್ಗೆ ಹಾಜರುಪಡಿಸಿದ್ದರು.</p>.<p>ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ‘ನನ್ನ ಕಕ್ಷಿದಾರರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ’ ಎಂದು ಪುರಕಾಯಸ್ಥ ಪರ ವಕೀಲರು ಇದನ್ನು ವಿರೋಧಿಸಿದರು.</p>.<p>‘ನನ್ನ ಕಕ್ಷಿದಾರರು ಯಾವ ಭಯೋತ್ಪಾದನಾ ಕೃತ್ಯ ಎಸಗಿದ್ದಾರೆ. ಪತ್ರಕರ್ತ ಅಂತಹ ಕೃತ್ಯ ಎಸಗಬಹುದೇ? ಎಫ್ಐಆರ್ನಲ್ಲಿರುವ ಆರೋಪಗಳೇನು? ಕೋವಿಡ್ ನೀತಿ ಟೀಕಿಸಿ, ರೈತರ ಪ್ರತಿಭಟನೆ ಕುರಿತು ವರದಿ ಮಾಡಿದ್ದೇವೆ. ಅದು ಭಯೋತ್ಪಾದನಾ ಕೃತ್ಯವೇ?’ ಎಂದು ಪುರಕಾಯಸ್ಥ ಪರ ವಕೀಲರು ಪ್ರಶ್ನಿಸಿದರು.</p>.<p>ಚಕ್ರವರ್ತಿ ಪರ ವಕೀಲರು,ನನ್ನ ಕಕ್ಷಿದಾರರು ಪತ್ರಕರ್ತರಲ್ಲ, ಅವರ ಯಾವುದೇ ಹಣವನ್ನು ಪಡೆದಿಲ್ಲ ಎಂದು ವಾದಿಸಿದರು. ಕಾಶ್ಮೀರ ಮತ್ತು ಅರುಣಾಚಲಪ್ರದೇಶ ಇಲ್ಲದ ಭಾರತದ ನಕ್ಷೆಯನ್ನು ನ್ಯೂಸ್ಕ್ಲಿಕ್ ಪ್ರಕಟಿಸಿದೆ ಎಂಬ ಯಾವುದೇ ಆರೋಪಗಳಿಲ್ಲ ಎಂದರು.</p>.<p>ಪ್ರತಿವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ ಅವರು, ಪ್ರಕರಣ ಇನ್ನು ಸಾಕ್ಷ್ಯ ಸಂಗ್ರಹಿಸುವ ಹಂತದಲ್ಲಿದೆ. ಆರೋಪಿಗಳ ನ್ಯಾಯಾಂಗ ಬಂಧನ ಕೋರಿರುವುದು ನ್ಯಾಯಯುತವಾಗಿದೆ ಎಂದು ತಿಳಿಸಿದರು.</p>.<p>ಪುರಕಾಯಸ್ಥ ಮತ್ತು ಚಕ್ರವರ್ತಿ ಇಬ್ಬರನ್ನೂ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ವಿಭಾಗ ಅಕ್ಟೋಬರ್ 3ರಂದು ನ್ಯೂಸ್ಕ್ಲಿಕ್ನ ದೆಹಲಿಯ ಕಚೇರಿಯಲ್ಲಿ ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನ್ಯೂಸ್ಕ್ಲಿಕ್ ಪ್ರಕರಣದಲ್ಲಿ ಸುದ್ದಿ ಪೋರ್ಟಲ್ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ ಎಚ್.ಆರ್. ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಕೋರ್ಟ್ 10 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>.<p>ಚೀನಾ ಪರ ಪ್ರಚಾರ ನಡೆಸಲು ಸುದ್ದಿ ಪೋರ್ಟಲ್ ಹಣ ಪಡೆದಿದೆ ಎಂಬ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಬಂಧಿಸಿದ್ದು, ಮಂಗಳವಾರ ಕೋರ್ಟ್ಗೆ ಹಾಜರುಪಡಿಸಿದ್ದರು.</p>.<p>ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ‘ನನ್ನ ಕಕ್ಷಿದಾರರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ’ ಎಂದು ಪುರಕಾಯಸ್ಥ ಪರ ವಕೀಲರು ಇದನ್ನು ವಿರೋಧಿಸಿದರು.</p>.<p>‘ನನ್ನ ಕಕ್ಷಿದಾರರು ಯಾವ ಭಯೋತ್ಪಾದನಾ ಕೃತ್ಯ ಎಸಗಿದ್ದಾರೆ. ಪತ್ರಕರ್ತ ಅಂತಹ ಕೃತ್ಯ ಎಸಗಬಹುದೇ? ಎಫ್ಐಆರ್ನಲ್ಲಿರುವ ಆರೋಪಗಳೇನು? ಕೋವಿಡ್ ನೀತಿ ಟೀಕಿಸಿ, ರೈತರ ಪ್ರತಿಭಟನೆ ಕುರಿತು ವರದಿ ಮಾಡಿದ್ದೇವೆ. ಅದು ಭಯೋತ್ಪಾದನಾ ಕೃತ್ಯವೇ?’ ಎಂದು ಪುರಕಾಯಸ್ಥ ಪರ ವಕೀಲರು ಪ್ರಶ್ನಿಸಿದರು.</p>.<p>ಚಕ್ರವರ್ತಿ ಪರ ವಕೀಲರು,ನನ್ನ ಕಕ್ಷಿದಾರರು ಪತ್ರಕರ್ತರಲ್ಲ, ಅವರ ಯಾವುದೇ ಹಣವನ್ನು ಪಡೆದಿಲ್ಲ ಎಂದು ವಾದಿಸಿದರು. ಕಾಶ್ಮೀರ ಮತ್ತು ಅರುಣಾಚಲಪ್ರದೇಶ ಇಲ್ಲದ ಭಾರತದ ನಕ್ಷೆಯನ್ನು ನ್ಯೂಸ್ಕ್ಲಿಕ್ ಪ್ರಕಟಿಸಿದೆ ಎಂಬ ಯಾವುದೇ ಆರೋಪಗಳಿಲ್ಲ ಎಂದರು.</p>.<p>ಪ್ರತಿವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾತ್ಸವ ಅವರು, ಪ್ರಕರಣ ಇನ್ನು ಸಾಕ್ಷ್ಯ ಸಂಗ್ರಹಿಸುವ ಹಂತದಲ್ಲಿದೆ. ಆರೋಪಿಗಳ ನ್ಯಾಯಾಂಗ ಬಂಧನ ಕೋರಿರುವುದು ನ್ಯಾಯಯುತವಾಗಿದೆ ಎಂದು ತಿಳಿಸಿದರು.</p>.<p>ಪುರಕಾಯಸ್ಥ ಮತ್ತು ಚಕ್ರವರ್ತಿ ಇಬ್ಬರನ್ನೂ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ವಿಭಾಗ ಅಕ್ಟೋಬರ್ 3ರಂದು ನ್ಯೂಸ್ಕ್ಲಿಕ್ನ ದೆಹಲಿಯ ಕಚೇರಿಯಲ್ಲಿ ಬಂಧಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>