<p><strong>ತಿರುವನಂತಪುರ</strong>: ಕೇರಳದ ಎರ್ನಾಕುಳಂ ಜಿಲ್ಲೆಯ ಮುನಂಬಮ್ನಲ್ಲಿ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್ ಚರ್ಚ್ನ ಬೆಂಬಲದೊಂದಿಗೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಯಾರೊಬ್ಬರನ್ನೂ ಸ್ಥಳಾಂತರಿಸಬಾರದು ಎಂದು ಸಿಪಿಐ ಆಗ್ರಹಿಸಿದೆ.</p>.<p>ಮುನಂಬಮ್ ಗ್ರಾಮಗಳಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ ಹಲವು ಆಸ್ತಿಗಳನ್ನು ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸುತ್ತಿದೆ ಎಂದು ಚರ್ಚ್ ಆರೋಪ ಮಾಡಿದೆ.</p>.<p>‘ನೋಂದಾಯಿತ ಪತ್ರಗಳು, ಭೂ ತೆರಿಗೆ ಪಾಪತಿ ರಸೀದಿಗಳು ಇದ್ದ ಹೊರತಾಗಿಯೂ ವಕ್ಫ್ ಮಂಡಳಿಯು ನಮ್ಮ ಭೂಮಿ ಮತ್ತು ಆಸ್ತಿಗಳ ಮೇಲೆ ಕಾನೂನುಬಾಹಿರವಾಗಿ ಹಕ್ಕು ಪ್ರತಿಪಾದಿಸುತ್ತಿದೆ’ ಎಂದು ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಂಬಮ್ ಗ್ರಾಮಗಳ ನಿವಾಸಿಗಳು ದೂರಿದ್ದಾರೆ.</p>.<p>ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳ ಪ್ರಕಾರ, 1950ರಲ್ಲಿ ಅವರ ಜಮೀನನ್ನು ಕೋಯಿಕೋಡ್ನ ಫಾರೂಕ್ ಕಾಲೇಜಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗಿತ್ತು. ಇದು ವಕ್ಫ್ ಭೂಮಿಯಲ್ಲ. ಅದಾಗ್ಯೂ ಈ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.</p>.<p>ಕರ್ನಾಟಕದಂತೆ ಕೇರಳದಲ್ಲೂ ವಕ್ಫ್ ಭೂ ವಿವಾದ ರಾಜಕೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದು, ವಿವಿಧ ಪಕ್ಷಗಳು ಪ್ರತಿಕ್ರಿಯಿಸಿವೆ.</p>.<p><strong>ಸಿಪಿಐ ಎಚ್ಚರಿಕೆ:</strong></p>.<p>ಆಡಳಿತಾರೂಢ ಎಲ್ಡಿಎಫ್ನ ಎರಡನೇ ಅತಿದೊಡ್ಡ ಪಾಲುದಾರ ಪಕ್ಷವಾದ ಸಿಪಿಐ, ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಎಚ್ಚರಿಕೆ ನೀಡಿದೆ.</p>.<p>‘ಮುನಂಬಮ್ನಿಂದ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬುದು ಪಕ್ಷದ ನಿಲುವಾಗಿದೆ. ವಕ್ಫ್ ಭೂಮಿಯೇ ಆಗಲಿ, ದೇವಸ್ವಂ ಭೂಮಿಯೇ ಆಗಲಿ ಬಡವರನ್ನು ಸ್ಥಳಾಂತರಿಸಬಾರದು’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ‘ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>ಮುನಂಬಮ್ ವಿಷಯದಲ್ಲಿ ಕೆಲವರು ಕೋಮುವಾದ ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಆರ್ಎಸ್ಎಸ್, ಎಸ್ಡಿಪಿಐ ಕ್ರಮವಾಗಿ ಹಿಂದೂ ಮತ್ತು ಮುಸ್ಲಿಂ ಮತಾಂಧತೆಯ ಬೀಜಗಳನ್ನು ಬಿತ್ತುತ್ತಿವೆ ಎಂದು ಅವರು ಪೋಸ್ಟ್ನಲ್ಲಿ ದೂರಿದ್ದಾರೆ.</p>.<p>ಕೇಂದ್ರ ಸರ್ಕಾರ ಪರಿಚಯಿಸಿರುವ ವಕ್ಫ್ (ತಿದ್ದುಪಡಿ) ಮಸೂದೆ–2024 ಅನ್ನು ವಿರೋಧಿಸಿ ಎಲ್ಡಿಎಫ್ ಮತ್ತು ಯುಡಿಎಫ್ ರಂಗಗಳು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ್ದವು.</p>.<p>ವಿರೋಧ ಪಕ್ಷವಾದ ಕಾಂಗ್ರೆಸ್ನ ನಾಯಕ ವಿ.ಡಿ.ಸತೀಶನ್, ‘ಮುನಂಬಮ್ನಲ್ಲಿರುವ ವಿವಾದಿತ ಭೂಮಿಯು ವಕ್ಫ್ ಮಂಡಳಿಗೆ ಸೇರಿದ್ದಲ್ಲ ಎಂಬುದು ನಮ್ಮ ಪಕ್ಷದ ನಿಲುವಾಗಿದೆ. ಸರ್ಕಾರ ಬಯಸಿದರೆ ಈ ಸಮಸ್ಯೆಯನ್ನು 10 ನಿಮಿಷಗಳಲ್ಲಿ ಪರಿಹರಿಸಬಹುದು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಕೇರಳದ ಎರ್ನಾಕುಳಂ ಜಿಲ್ಲೆಯ ಮುನಂಬಮ್ನಲ್ಲಿ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಥೋಲಿಕ್ ಚರ್ಚ್ನ ಬೆಂಬಲದೊಂದಿಗೆ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಯಾರೊಬ್ಬರನ್ನೂ ಸ್ಥಳಾಂತರಿಸಬಾರದು ಎಂದು ಸಿಪಿಐ ಆಗ್ರಹಿಸಿದೆ.</p>.<p>ಮುನಂಬಮ್ ಗ್ರಾಮಗಳಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದ ಹಲವು ಆಸ್ತಿಗಳನ್ನು ವಕ್ಫ್ ಮಂಡಳಿ ಕಾನೂನುಬಾಹಿರವಾಗಿ ಹಕ್ಕು ಸಾಧಿಸುತ್ತಿದೆ ಎಂದು ಚರ್ಚ್ ಆರೋಪ ಮಾಡಿದೆ.</p>.<p>‘ನೋಂದಾಯಿತ ಪತ್ರಗಳು, ಭೂ ತೆರಿಗೆ ಪಾಪತಿ ರಸೀದಿಗಳು ಇದ್ದ ಹೊರತಾಗಿಯೂ ವಕ್ಫ್ ಮಂಡಳಿಯು ನಮ್ಮ ಭೂಮಿ ಮತ್ತು ಆಸ್ತಿಗಳ ಮೇಲೆ ಕಾನೂನುಬಾಹಿರವಾಗಿ ಹಕ್ಕು ಪ್ರತಿಪಾದಿಸುತ್ತಿದೆ’ ಎಂದು ಎರ್ನಾಕುಳಂ ಜಿಲ್ಲೆಯ ಚೆರಾಯಿ ಮತ್ತು ಮುನಂಬಮ್ ಗ್ರಾಮಗಳ ನಿವಾಸಿಗಳು ದೂರಿದ್ದಾರೆ.</p>.<p>ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳ ಪ್ರಕಾರ, 1950ರಲ್ಲಿ ಅವರ ಜಮೀನನ್ನು ಕೋಯಿಕೋಡ್ನ ಫಾರೂಕ್ ಕಾಲೇಜಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗಿತ್ತು. ಇದು ವಕ್ಫ್ ಭೂಮಿಯಲ್ಲ. ಅದಾಗ್ಯೂ ಈ ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.</p>.<p>ಕರ್ನಾಟಕದಂತೆ ಕೇರಳದಲ್ಲೂ ವಕ್ಫ್ ಭೂ ವಿವಾದ ರಾಜಕೀಯ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದು, ವಿವಿಧ ಪಕ್ಷಗಳು ಪ್ರತಿಕ್ರಿಯಿಸಿವೆ.</p>.<p><strong>ಸಿಪಿಐ ಎಚ್ಚರಿಕೆ:</strong></p>.<p>ಆಡಳಿತಾರೂಢ ಎಲ್ಡಿಎಫ್ನ ಎರಡನೇ ಅತಿದೊಡ್ಡ ಪಾಲುದಾರ ಪಕ್ಷವಾದ ಸಿಪಿಐ, ಸಮಾಜದಲ್ಲಿ ಕೋಮು ವಿಭಜನೆ ಸೃಷ್ಟಿಸಲು ಪಟ್ಟಭದ್ರ ಹಿತಾಸಕ್ತಿಗಳು ಯತ್ನಿಸುತ್ತಿವೆ ಎಂದು ಎಚ್ಚರಿಕೆ ನೀಡಿದೆ.</p>.<p>‘ಮುನಂಬಮ್ನಿಂದ ಯಾರನ್ನೂ ಒಕ್ಕಲೆಬ್ಬಿಸಬಾರದು ಎಂಬುದು ಪಕ್ಷದ ನಿಲುವಾಗಿದೆ. ವಕ್ಫ್ ಭೂಮಿಯೇ ಆಗಲಿ, ದೇವಸ್ವಂ ಭೂಮಿಯೇ ಆಗಲಿ ಬಡವರನ್ನು ಸ್ಥಳಾಂತರಿಸಬಾರದು’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ‘ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>ಮುನಂಬಮ್ ವಿಷಯದಲ್ಲಿ ಕೆಲವರು ಕೋಮುವಾದ ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಆರ್ಎಸ್ಎಸ್, ಎಸ್ಡಿಪಿಐ ಕ್ರಮವಾಗಿ ಹಿಂದೂ ಮತ್ತು ಮುಸ್ಲಿಂ ಮತಾಂಧತೆಯ ಬೀಜಗಳನ್ನು ಬಿತ್ತುತ್ತಿವೆ ಎಂದು ಅವರು ಪೋಸ್ಟ್ನಲ್ಲಿ ದೂರಿದ್ದಾರೆ.</p>.<p>ಕೇಂದ್ರ ಸರ್ಕಾರ ಪರಿಚಯಿಸಿರುವ ವಕ್ಫ್ (ತಿದ್ದುಪಡಿ) ಮಸೂದೆ–2024 ಅನ್ನು ವಿರೋಧಿಸಿ ಎಲ್ಡಿಎಫ್ ಮತ್ತು ಯುಡಿಎಫ್ ರಂಗಗಳು ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ್ದವು.</p>.<p>ವಿರೋಧ ಪಕ್ಷವಾದ ಕಾಂಗ್ರೆಸ್ನ ನಾಯಕ ವಿ.ಡಿ.ಸತೀಶನ್, ‘ಮುನಂಬಮ್ನಲ್ಲಿರುವ ವಿವಾದಿತ ಭೂಮಿಯು ವಕ್ಫ್ ಮಂಡಳಿಗೆ ಸೇರಿದ್ದಲ್ಲ ಎಂಬುದು ನಮ್ಮ ಪಕ್ಷದ ನಿಲುವಾಗಿದೆ. ಸರ್ಕಾರ ಬಯಸಿದರೆ ಈ ಸಮಸ್ಯೆಯನ್ನು 10 ನಿಮಿಷಗಳಲ್ಲಿ ಪರಿಹರಿಸಬಹುದು’ ಎಂದು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>