<p><strong>ನವದೆಹಲಿ</strong>: ಕೇಂದ್ರೀಯ ವಿದ್ಯಾಲಯಗಳ ಪ್ರವೇಶಾತಿಯಲ್ಲಿ ಸಂಸದರ ಕೋಟಾವನ್ನು ಮರು ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>.<p>ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020ರ ದೂರದೃಷ್ಟಿಯಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ(ಪಿಟಿಆರ್) ಮತ್ತು ಕಲಿಕೆಯ ಗುಣಮಟ್ಟ ಕಾಪಾಡಲು ಕೇಂದ್ರ ಸರ್ಕಾರ 2022ರಲ್ಲೇ ಸಂಸದರ ಕೋಟಾ ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.</p>.<p>ಈ ಹಿಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಲೋಕಸಭೆ ಸದಸ್ಯರ ಕೋಟಾದಡಿ ಪ್ರವೇಶ ಅವಕಾಶ ಇತ್ತು. ಸಂಸದರು 10 ಮಕ್ಕಳ ಪ್ರವೇಶಕ್ಕೆ ಶಿಫಾರಸು ಮಾಡುವ ವಿವೇಚನಾಧಿಕಾರ ಹೊಂದಿದ್ದರು. ಜಿಲ್ಲಾಧಿಕಾರಿಗಳು 17 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡಬಹುದಿತ್ತು. </p>.<p>ಲೋಕಸಭೆಯ 543 ಸದಸ್ಯರು , ರಾಜ್ಯಸಭೆಯ 245 ಸದಸ್ಯರು ಸೇರಿ ವರ್ಷಕ್ಕೆ 7,880 ಮಕ್ಕಳ ಪ್ರವೇಶಕ್ಕೆ ಈ ಕೋಟಾದಡಿ ಶಿಫಾರಸು ಮಾಡಬಹುದಿತ್ತು.</p>.<p>ಇದು ಮಂಜೂರಾದ ಮಕ್ಕಳ ಸಂಖ್ಯೆಯನ್ನು ಮೀರುತ್ತದೆ ಮತ್ತು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣ ನೀಡಿ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ವಿಶೇಷ ಅವಕಾಶವನ್ನು 2022ರಲ್ಲಿ ಸ್ಥಗಿತಗೊಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೇಂದ್ರೀಯ ವಿದ್ಯಾಲಯಗಳ ಪ್ರವೇಶಾತಿಯಲ್ಲಿ ಸಂಸದರ ಕೋಟಾವನ್ನು ಮರು ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.</p>.<p>ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯ ತಿಳಿಸಿದ್ದಾರೆ.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020ರ ದೂರದೃಷ್ಟಿಯಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತ(ಪಿಟಿಆರ್) ಮತ್ತು ಕಲಿಕೆಯ ಗುಣಮಟ್ಟ ಕಾಪಾಡಲು ಕೇಂದ್ರ ಸರ್ಕಾರ 2022ರಲ್ಲೇ ಸಂಸದರ ಕೋಟಾ ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.</p>.<p>ಈ ಹಿಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಲೋಕಸಭೆ ಸದಸ್ಯರ ಕೋಟಾದಡಿ ಪ್ರವೇಶ ಅವಕಾಶ ಇತ್ತು. ಸಂಸದರು 10 ಮಕ್ಕಳ ಪ್ರವೇಶಕ್ಕೆ ಶಿಫಾರಸು ಮಾಡುವ ವಿವೇಚನಾಧಿಕಾರ ಹೊಂದಿದ್ದರು. ಜಿಲ್ಲಾಧಿಕಾರಿಗಳು 17 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡಬಹುದಿತ್ತು. </p>.<p>ಲೋಕಸಭೆಯ 543 ಸದಸ್ಯರು , ರಾಜ್ಯಸಭೆಯ 245 ಸದಸ್ಯರು ಸೇರಿ ವರ್ಷಕ್ಕೆ 7,880 ಮಕ್ಕಳ ಪ್ರವೇಶಕ್ಕೆ ಈ ಕೋಟಾದಡಿ ಶಿಫಾರಸು ಮಾಡಬಹುದಿತ್ತು.</p>.<p>ಇದು ಮಂಜೂರಾದ ಮಕ್ಕಳ ಸಂಖ್ಯೆಯನ್ನು ಮೀರುತ್ತದೆ ಮತ್ತು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣ ನೀಡಿ ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ವಿಶೇಷ ಅವಕಾಶವನ್ನು 2022ರಲ್ಲಿ ಸ್ಥಗಿತಗೊಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>