ಕೇರಳ ಸರ್ಕಾರವೂ ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿದೆ. ಅದನ್ನು ಲಿಖಿತವಾಗಿ ಕೇಂದ್ರಕ್ಕೆ ತಿಳಿಸಲು ನಿರ್ಧರಿಸಿದೆ. ಛತ್ತೀಸಗಡ ಸರ್ಕಾರವು ಈ ವಿಚಾರದಲ್ಲಿ ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಕೂಡ ಈ ವಾರದಲ್ಲಿ ನಿಲುವು ಪ್ರಕಟಿಸಲಿವೆ. ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ ಮತ್ತು ಜಾರ್ಖಂಡ್, ಬಿಜೆಪಿಯೇತರ ಪಕ್ಷಗಳ ಸರ್ಕಾರಗಳ ನಿರ್ಧಾರವನ್ನು ಬೆಂಬಲಿಸುವ ಸಾಧ್ಯತೆ ಇದೆ.