ಅಲ್ಲದೇ ಸರ್ಕೋಡಾದಲ್ಲಿ ಮಾತನಾಡಿದ್ದ ಅವರು, ಪಿಲಿಭಿತ್ನಲ್ಲಿ ತಾವು ರೂಪಿಸಿದ್ದ ಪದ್ಧತಿಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದರು.ಇದನ್ನೂ ಆಯೋಗ ಖಂಡಿಸಿದೆ.ತಮಗೆ ಸಿಕ್ಕ ಮತಗಳ ಆಧಾರದಲ್ಲಿ ಗ್ರಾಮಗಳನ್ನು ಎ, ಬಿ, ಸಿ, ಡಿ ಶ್ರೇಣಿಗಳಲ್ಲಿ ವಿಂಗಡಿಸಿ, ಹೆಚ್ಚು ಮತ ನೀಡಿದ ಹಳ್ಳಿಗಳಿಗೆ ಅಭಿವೃದ್ಧಿ ಕೆಲಸಗಳಲ್ಲಿ ಆದ್ಯತೆ ನೀಡುವ ಪದ್ಧತಿಯನ್ನು ಅನುಸರಿಸಲಾಗುವುದು ಎಂದು ಮೇನಕಾ ಹೇಳಿದ್ದರು.