ರಾಮ್ಪ್ರಸಾದ್ ಅವರು ಅಸ್ಸಾಂನ ಕೋಕ್ರಾಝಾರ್ ಜಿಲ್ಲೆಯ ರಾಮ್ಫಾಲ್ಬಿಲ್ ಗ್ರಾಮದ ನಿವಾಸಿ. ಸುರಂಗದಿಂದ ಮಂಗಳವಾರ ಹೊರಗೆ ಕರೆತಂದ ಬಳಿಕ ರಾತ್ರಿ ಸುಮಾರು 8.30ಕ್ಕೆ ಅವರು ಮಗಳ ಜೊತೆ ಮಾತನಾಡಿದರು. ‘ನಮ್ಮ ತಂದೆ ಅಪಾಯದಲ್ಲಿ ಸಿಲುಕಿದ್ದಾರೆ ಎಂಬ ವಿಷಯ ತಿಳಿದಾಗಿನಿಂದ ನಾವು ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ನಮ್ಮ ತಾಯಿ ಹಲವು ಬಾರಿ ಮೂರ್ಛೆ ಹೋಗಿದ್ದರು’ ಎಂದು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಬಿದಂಗ್ ತಿಳಿಸಿದರು.