'ನಮ್ಮ ಮಹಾದೇವನ ಬಗ್ಗೆ ನಿರಂತರವಾಗಿ ಅವಮಾನಿಸುವುದನ್ನು ಮತ್ತು ಅಗೌರವಿಸುವುದನ್ನು ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ ಏನನ್ನೋ ಹೇಳಿದೆ. ನನ್ನ ಮಾತುಗಳು ಯಾರಿಗಾದರೂ ಮುಜುಗರವನ್ನುಂಟು ಮಾಡಿದಲ್ಲಿ ಅಥವಾ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದಲ್ಲಿ, ನಾನು ಬೇಷರತ್ತಾಗಿ ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ. ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ' ಎಂದು ನೂಪುರ್ ಶರ್ಮಾ ತಿಳಿಸಿದ್ದಾರೆ.