ಮತದಾರರನ್ನು ಉದ್ದೇಶಿಸಿ ಮಾತ ನಾಡಿದ ಅಖಿಲೇಶ್, ‘ನಿಮಗಾಗಿ ವಿಶ್ವವಿದ್ಯಾಲಯ ನಿರ್ಮಿಸಿದ ವ್ಯಕ್ತಿ ಕೋಳಿ ಕಳ್ಳತನದ ಆರೋಪದಲ್ಲಿ ಜೈಲಿನಲ್ಲಿ ದ್ದಾರೆ. ಆದರೆ, ರೈತರನ್ನು ಅಪ್ಪಚ್ಚಿ ಮಾಡಿದ ವ್ಯಕ್ತಿ ಜೈಲಿನಿಂದ ಹೊರಗೆ ಇದ್ದಾನೆ. ಜಗತ್ತಿನಲ್ಲಿ ಎಲ್ಲಿಯೂ ರೈತರನ್ನು ಹೀಗೆ ಕೊಂದಿಲ್ಲ. ಆದರೆ ಈಗ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆ ಯುತ್ತಿದೆ. ಹೀಗಾಗಿಯೇ ಆರೋಪಿಗೆ ಜಾಮೀನು ದೊರೆತಿದೆ ಮತ್ತು ಆತ ಜೈಲಿನಿಂದ ಹೊರಗಿದ್ದಾನೆ’ ಎಂದು ಆರೋಪಿಸಿದ್ದಾರೆ. ‘ಈ ವಿಚಾರವನ್ನು ರೈತರು ಮರೆಯು ವುದಿಲ್ಲ. ಬಿಜೆಪಿಯು ರೈತರ ಎದುರು 700 ಬಸ್ಕಿ ಹೊಡೆದರೂ, ರೈತರು ಅವರನ್ನು ಕ್ಷಮಿಸುವುದಿಲ್ಲ. ಮೊದಲ ಹಂತದ ಮತದಾನದಲ್ಲೇ ರೈತರು ಮತ್ತು ಸಮಾಜದ ಎಲ್ಲಾ ವರ್ಗದ ಜನರು ಬಿಜೆಪಿಯನ್ನು ಅಳಿಸಿಹಾಕಿದ್ದಾರೆ. ಎರಡನೇ ಹಂತದ ಮತದಾನ ದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲಿದ್ದಾರೆ’ ಎಂದು ಹೇಳಿದ್ದಾರೆ.