<p><strong>ನವದೆಹಲಿ</strong>: ಸಂಘಟಿತ ಅಪರಾಧ ಜಾಲಗಳ ದತ್ತಾಂಶ (ಡೇಟಾಬೇಸ್) ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಚಾಲನೆ ನೀಡಿದರು.</p>.<p>ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಯು ಎನ್ಐಎಯ ಕಳೆದುಹೋದ, ಲೂಟಿಯಾದ ಮತ್ತು ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳ ಮಾಹಿತಿಯನ್ನು ಒಳಗೊಂಡಿರಲಿದೆ. ದೇಶದಾದ್ಯಂತ ತನಿಖಾ ಸಂಸ್ಥೆಗಳು ಬಳಕೆಗೆ ಈ ಎರಡು ಡೇಟಾಬೇಸ್ಗಳನ್ನು ರಚಿಸಲಾಗಿದೆ.</p>.<p>ಎನ್ಐಎ ಆಯೋಜಿಸಿದ್ದ ಭಯೋತ್ಪಾದನೆ ವಿರೋಧಿ ಸಮಾವೇಶ–2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಎನ್ಐಎಯ ಪರಿಷ್ಕೃತ ಅಪರಾಧ ಕೈಪಿಡಿಯನ್ನೂ ಅನಾವರಣ ಮಾಡಿದರು.</p>.<p>‘ಮುಂದಿನ ದಿನಗಳಲ್ಲಿ ಸಂಘಟಿತ ಅಪರಾಧಗಳ ಮೇಲೆ 360 ಡಿಗ್ರಿಯಲ್ಲಿ ಕಣ್ಗಾವಲಿಡಲಾಗುತ್ತದೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ದತ್ತಾಂಶ ವ್ಯವಸ್ಥೆಯನ್ನು ರಚಿಸಲಾಗಿದೆ’ ಎಂದು ಅವರು ಹೇಳಿದರು.</p>.<p>‘ಸಂಘಟಿತ ಅಪರಾಧ ಜಾಲವು ಮೊದಲಿಗೆ ಸುಲಿಗೆ ಉದ್ದೇಶದಿಂದ ಕೃತ್ಯ ಎಸಗುತ್ತದೆ. ಅವರ ನಾಯಕರು ವಿದೇಶಕ್ಕೆ ಪರಾರಿಯಾಗಿ ಅಲ್ಲಿ ನೆಲಸಿದ ನಂತರ ಜಾಲವು ಸುಲಭವಾಗಿ ಭಯೋತ್ಪಾದಕ ಸಂಘಟನೆಗಳ ಸಂಪರ್ಕಕ್ಕೆ ಬರುತ್ತದೆ. ನಂತರ ದೇಶದೊಳಗೇ ಭಯೋತ್ಪಾದನೆ ಕೃತ್ಯ ಎಸಗುತ್ತದೆ’ ಎಂದು ವಿವರಿಸಿದರು.</p>.<p>ಪ್ರತಿ ರಾಜ್ಯವೂ ಎನ್ಐಎ, ಸಿಬಿಐ ಮಾರ್ಗದರ್ಶನದೊಂದಿಗೆ ಈ ದತ್ತಾಂಶ ವ್ಯವಸ್ಥೆಯನ್ನು ಬಳಸಿಕೊಂಡು, ತಮ್ಮ ವ್ಯಾಪ್ತಿಯ ಅಪರಾಧವನ್ನು ತಗ್ಗಿಸಬೇಕು ಎಂದು ಹೇಳಿದರು.</p>.<p>ಎರಡು ದಿನಗಳ ಸಮಾವೇಶದಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸಂಘಟಿತ ಅಪರಾಧ ಜಾಲಗಳ ದತ್ತಾಂಶ (ಡೇಟಾಬೇಸ್) ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಚಾಲನೆ ನೀಡಿದರು.</p>.<p>ಶಸ್ತ್ರಾಸ್ತ್ರ ದತ್ತಾಂಶ ವ್ಯವಸ್ಥೆಯು ಎನ್ಐಎಯ ಕಳೆದುಹೋದ, ಲೂಟಿಯಾದ ಮತ್ತು ವಶಕ್ಕೆ ಪಡೆದ ಶಸ್ತ್ರಾಸ್ತ್ರಗಳ ಮಾಹಿತಿಯನ್ನು ಒಳಗೊಂಡಿರಲಿದೆ. ದೇಶದಾದ್ಯಂತ ತನಿಖಾ ಸಂಸ್ಥೆಗಳು ಬಳಕೆಗೆ ಈ ಎರಡು ಡೇಟಾಬೇಸ್ಗಳನ್ನು ರಚಿಸಲಾಗಿದೆ.</p>.<p>ಎನ್ಐಎ ಆಯೋಜಿಸಿದ್ದ ಭಯೋತ್ಪಾದನೆ ವಿರೋಧಿ ಸಮಾವೇಶ–2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಎನ್ಐಎಯ ಪರಿಷ್ಕೃತ ಅಪರಾಧ ಕೈಪಿಡಿಯನ್ನೂ ಅನಾವರಣ ಮಾಡಿದರು.</p>.<p>‘ಮುಂದಿನ ದಿನಗಳಲ್ಲಿ ಸಂಘಟಿತ ಅಪರಾಧಗಳ ಮೇಲೆ 360 ಡಿಗ್ರಿಯಲ್ಲಿ ಕಣ್ಗಾವಲಿಡಲಾಗುತ್ತದೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ದತ್ತಾಂಶ ವ್ಯವಸ್ಥೆಯನ್ನು ರಚಿಸಲಾಗಿದೆ’ ಎಂದು ಅವರು ಹೇಳಿದರು.</p>.<p>‘ಸಂಘಟಿತ ಅಪರಾಧ ಜಾಲವು ಮೊದಲಿಗೆ ಸುಲಿಗೆ ಉದ್ದೇಶದಿಂದ ಕೃತ್ಯ ಎಸಗುತ್ತದೆ. ಅವರ ನಾಯಕರು ವಿದೇಶಕ್ಕೆ ಪರಾರಿಯಾಗಿ ಅಲ್ಲಿ ನೆಲಸಿದ ನಂತರ ಜಾಲವು ಸುಲಭವಾಗಿ ಭಯೋತ್ಪಾದಕ ಸಂಘಟನೆಗಳ ಸಂಪರ್ಕಕ್ಕೆ ಬರುತ್ತದೆ. ನಂತರ ದೇಶದೊಳಗೇ ಭಯೋತ್ಪಾದನೆ ಕೃತ್ಯ ಎಸಗುತ್ತದೆ’ ಎಂದು ವಿವರಿಸಿದರು.</p>.<p>ಪ್ರತಿ ರಾಜ್ಯವೂ ಎನ್ಐಎ, ಸಿಬಿಐ ಮಾರ್ಗದರ್ಶನದೊಂದಿಗೆ ಈ ದತ್ತಾಂಶ ವ್ಯವಸ್ಥೆಯನ್ನು ಬಳಸಿಕೊಂಡು, ತಮ್ಮ ವ್ಯಾಪ್ತಿಯ ಅಪರಾಧವನ್ನು ತಗ್ಗಿಸಬೇಕು ಎಂದು ಹೇಳಿದರು.</p>.<p>ಎರಡು ದಿನಗಳ ಸಮಾವೇಶದಲ್ಲಿ ದೇಶದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>