ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾತನಾಡಿ, ‘ತಮ್ಮ ಹಿರಿಯ ಸಹೋದರ ವಿನೋದ್ ಅದಾನಿ ಗುಂಪು ನಿರ್ವಹಣೆ ಮತ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗಿಯಾಗಿಲ್ಲ ಎಂದು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದು, ಅವ್ಯವಹಾರಗಳ ಕುರಿತ ಪ್ರಶ್ನೆಗಳನ್ನು ಪದೇಪದೇ ತಳ್ಳಿಹಾಕಿದ್ದಾರೆ. ಆದರೆ, ಇತ್ತೀಚಿನ ನಿದರ್ಶನಗಳು ಇದು ಸುಳ್ಳೆಂದು ಹೇಳಿವೆ’ ಎಂದಿದ್ದಾರೆ.