2019ರ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಪೂರ್ವದಲ್ಲಿ ವೈಎಸ್ಆರ್ಸಿಪಿ ಮುಖಸ್ಥ ವೈ.ಎಸ್. ಜಗನ್ ಮೋಹನರೆಡ್ಡಿ ಅವರು ಪ್ರಶಾಂತ್ ಕೀಶೋರ್ ಅವರ ನೆರವು ಪಡೆದಿದ್ದರು. ಅಂತಿಮವಾಗಿ ಆ ಚುನಾವಣೆಯಲ್ಲಿ ಅವರ ಪಕ್ಷ ಗೆಲುವು ಸಾಧಿಸಿತ್ತು. ರೆಡ್ಡಿ ಅವರ ಜತೆಗೆ ಕಿಶೋರ್ ಕೈಜೊಡಿಸಿದ್ದಕ್ಕೆ ಟಿಡಿಪಿ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಆದರೆ, ಈಗ ಈ ಭೇಟಿಯು ಆಂಧ್ರ ರಾಜಕಾರಣದಲ್ಲಿ ಮತ್ತೊಂದು ತಿರುವು ಪಡೆದಿದೆ.