‘ಇದು ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆ. ಪರಸ್ಪರರನ್ನು ನಾವು ನಾಶ ಮಾಡುತ್ತಾ ಹೋದರೆ ಈ ಸಂಸ್ಥೆಯ ಮೇಲೆ ಯಾರಿಗೆ ವಿಶ್ವಾಸ ಉಳಿಯುತ್ತದೆ? ನ್ಯಾಯಾಲಯವು ಏನು ಮಾಡುತ್ತಿದೆ, ಏಕೆ ಮಾಡುತ್ತಿದೆ ಎಂಬುದನ್ನು ಗಮನಿಸಬೇಕು. ನೇರವಾಗಿ ವಾಗ್ದಾಳಿ ನಡೆಸುವುದಲ್ಲ. ನ್ಯಾಯಮೂರ್ತಿಗಳು ಮಾಧ್ಯಮದ ಮುಂದೆ ಹೋಗಿ ತಮ್ಮನ್ನು ಸಮರ್ಥಿಸಿಕೊಳ್ಳಲಾಗದು’ ಎಂದು ಪೀಠ ಹೇಳಿದೆ.