<p><strong>ನವದೆಹಲಿ</strong>: 'ಮುನ್ನೆಚ್ಚರಿಕೆಯ ಕಾರಣಕ್ಕೆ ವ್ಯಕ್ತಿಯನ್ನು ಬಂಧಿಸುವುದು ತೀರಾ ಕಠಿಣವಾದ ಕ್ರಮ. ಈ ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸುವುದನ್ನು ಅಥವಾ ತೀರಾ ಸಹಜವಾಗಿ ಬಳಕೆ ಮಾಡುವ ಪ್ರವೃತ್ತಿಯನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಬಂಧಿತ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. 'ಮುನ್ನೆಚ್ಚರಿಕೆಯ ಬಂಧನದ ಉದ್ದೇಶವು, ವ್ಯಕ್ತಿಯೊಬ್ಬ ಎಸಗಿದ ಕೃತ್ಯಕ್ಕೆ ಆತನನ್ನು ಶಿಕ್ಷಿಸುವುದಲ್ಲ; ಬದಲಿಗೆ, ಆತ ತಪ್ಪು ಮಾಡುವುದನ್ನು ತಡೆಯುವುದು' ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹೇಳಿದೆ.</p>.<p>‘ರಾಜ್ಯದ ಪೊಲೀಸ್ ವ್ಯವಸ್ಥೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿರ್ವಹಿಸಲು ಆಗುವುದಿಲ್ಲ ಎನ್ನುವುದು ಮುನ್ನೆಚ್ಚರಿಕೆಯ ಬಂಧನಕ್ಕೆ ಮುಂದಾಗುವುದಕ್ಕೆ ನೆಪ ಆಗಬಾರದು’ ಎಂದು ಪೀಠವು ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದರು.</p>.<p>‘ಮುನ್ನೆಚ್ಚರಿಕೆಯ ಬಂಧನ ಎಂಬುದು ತೀರಾ ನಿರ್ದಯವಾದ ಕ್ರಮ. ಹೀಗಾಗಿ, ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸಿ ಅಥವಾ ತೀರಾ ಸಹಜವಾಗಿ ಬಳಸಿ ಬಂಧನಕ್ಕೆ ಆದೇಶಿಸುವುದುನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು’ ಎಂದು ಪೀಠವು ಹೇಳಿದೆ.</p>.<p>ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಯನ್ನು ‘ತೆಲಂಗಾಣ ಅಪಾಯಕಾರಿ ಕೃತ್ಯಗಳ ನಿಯಂತ್ರಣ ಕಾಯ್ದೆ–1986’ ಅಡಿಯಲ್ಲಿ, ರಾಚಕೊಂಡ ಪೊಲೀಸ್ ಆಯುಕ್ತರ ಆದೇಶದ ಅನುಸಾರ ತೆಲಂಗಾಣದಲ್ಲಿ 2023ರ ಸೆಪ್ಟಂಬರ್ 12ರಂದು ಬಂಧಿಸಲಾಗಿತ್ತು. ಬಂಧನ ಆದೇಶವನ್ನು ರದ್ದು ಮಾಡಬೇಕು ಎಂಬ ಕೋರಿಕೆಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿತ್ತು.</p>.<p>ಯಾವುದೇ ಕಾಯ್ದೆಯ ಅಡಿಯಲ್ಲಿನ ‘ಮುನ್ನೆಚ್ಚರಿಕೆಯ ಬಂಧನ’ ಆದೇಶವನ್ನು ಅತ್ಯಂತ ಜಾಗರೂಕತೆಯಿಂದ, ಸಂಯಮದಿಂದ ಬಳಕೆ ಮಾಡಬೇಕು ಎಂಬುದು ಈಗಾಗಲೇ ಒಪ್ಪಿತವಾಗಿರುವ ಸಂಗತಿ ಎಂದು ಪೀಠವು ಹೇಳಿದೆ. </p>.<p>‘ದರೋಡೆಯಂತಹ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ಎಫ್ಐಆರ್ಗಳು ದಾಖಲಾಗಿವೆ ಎಂಬುದು, ಆ ವ್ಯಕ್ತಿಯು ಗೂಂಡಾ ಎಂದು ಭಾವಿಸಿ 1986ರ ಕಾಯ್ದೆಯನ್ನು ಬಳಸಿ ಮುನ್ನೆಚ್ಚರಿಕೆಯ ಕ್ರಮವಾಗಿ ವ್ಯಕ್ತಿಯನ್ನು ಬಂಧಿಸುವುದಕ್ಕೆ ಆಧಾರ ಆಗಬೇಕಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ’ ಎಂದು ಪೀಠವು ಈಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 'ಮುನ್ನೆಚ್ಚರಿಕೆಯ ಕಾರಣಕ್ಕೆ ವ್ಯಕ್ತಿಯನ್ನು ಬಂಧಿಸುವುದು ತೀರಾ ಕಠಿಣವಾದ ಕ್ರಮ. ಈ ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸುವುದನ್ನು ಅಥವಾ ತೀರಾ ಸಹಜವಾಗಿ ಬಳಕೆ ಮಾಡುವ ಪ್ರವೃತ್ತಿಯನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ಬಂಧಿತ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. 'ಮುನ್ನೆಚ್ಚರಿಕೆಯ ಬಂಧನದ ಉದ್ದೇಶವು, ವ್ಯಕ್ತಿಯೊಬ್ಬ ಎಸಗಿದ ಕೃತ್ಯಕ್ಕೆ ಆತನನ್ನು ಶಿಕ್ಷಿಸುವುದಲ್ಲ; ಬದಲಿಗೆ, ಆತ ತಪ್ಪು ಮಾಡುವುದನ್ನು ತಡೆಯುವುದು' ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಹೇಳಿದೆ.</p>.<p>‘ರಾಜ್ಯದ ಪೊಲೀಸ್ ವ್ಯವಸ್ಥೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿರ್ವಹಿಸಲು ಆಗುವುದಿಲ್ಲ ಎನ್ನುವುದು ಮುನ್ನೆಚ್ಚರಿಕೆಯ ಬಂಧನಕ್ಕೆ ಮುಂದಾಗುವುದಕ್ಕೆ ನೆಪ ಆಗಬಾರದು’ ಎಂದು ಪೀಠವು ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದರು.</p>.<p>‘ಮುನ್ನೆಚ್ಚರಿಕೆಯ ಬಂಧನ ಎಂಬುದು ತೀರಾ ನಿರ್ದಯವಾದ ಕ್ರಮ. ಹೀಗಾಗಿ, ಅಧಿಕಾರವನ್ನು ಮನಸ್ಸಿಗೆ ಬಂದ ಬಗೆಯಲ್ಲಿ ಬಳಸಿ ಅಥವಾ ತೀರಾ ಸಹಜವಾಗಿ ಬಳಸಿ ಬಂಧನಕ್ಕೆ ಆದೇಶಿಸುವುದುನ್ನು ಮೊಳಕೆಯಲ್ಲಿಯೇ ಚಿವುಟಿಹಾಕಬೇಕು’ ಎಂದು ಪೀಠವು ಹೇಳಿದೆ.</p>.<p>ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಯನ್ನು ‘ತೆಲಂಗಾಣ ಅಪಾಯಕಾರಿ ಕೃತ್ಯಗಳ ನಿಯಂತ್ರಣ ಕಾಯ್ದೆ–1986’ ಅಡಿಯಲ್ಲಿ, ರಾಚಕೊಂಡ ಪೊಲೀಸ್ ಆಯುಕ್ತರ ಆದೇಶದ ಅನುಸಾರ ತೆಲಂಗಾಣದಲ್ಲಿ 2023ರ ಸೆಪ್ಟಂಬರ್ 12ರಂದು ಬಂಧಿಸಲಾಗಿತ್ತು. ಬಂಧನ ಆದೇಶವನ್ನು ರದ್ದು ಮಾಡಬೇಕು ಎಂಬ ಕೋರಿಕೆಯನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿತ್ತು.</p>.<p>ಯಾವುದೇ ಕಾಯ್ದೆಯ ಅಡಿಯಲ್ಲಿನ ‘ಮುನ್ನೆಚ್ಚರಿಕೆಯ ಬಂಧನ’ ಆದೇಶವನ್ನು ಅತ್ಯಂತ ಜಾಗರೂಕತೆಯಿಂದ, ಸಂಯಮದಿಂದ ಬಳಕೆ ಮಾಡಬೇಕು ಎಂಬುದು ಈಗಾಗಲೇ ಒಪ್ಪಿತವಾಗಿರುವ ಸಂಗತಿ ಎಂದು ಪೀಠವು ಹೇಳಿದೆ. </p>.<p>‘ದರೋಡೆಯಂತಹ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ಎಫ್ಐಆರ್ಗಳು ದಾಖಲಾಗಿವೆ ಎಂಬುದು, ಆ ವ್ಯಕ್ತಿಯು ಗೂಂಡಾ ಎಂದು ಭಾವಿಸಿ 1986ರ ಕಾಯ್ದೆಯನ್ನು ಬಳಸಿ ಮುನ್ನೆಚ್ಚರಿಕೆಯ ಕ್ರಮವಾಗಿ ವ್ಯಕ್ತಿಯನ್ನು ಬಂಧಿಸುವುದಕ್ಕೆ ಆಧಾರ ಆಗಬೇಕಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ’ ಎಂದು ಪೀಠವು ಈಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>