ಗೋಮಾತೆ ತುಂಬಾ ಸೂಕ್ಷ್ಮ ಜೀವಿ. ಯಾವ ಕಾರ್ಖಾನೆಯೂ ತರಕಾರಿ, ಕಾಳುಗಳು ಮತ್ತು ಹಣ್ಣುಗಳನ್ನು ಉತ್ಪಾದನೆ ಮಾಡುವುದಿಲ್ಲ. ರಾಸಾಯನಿಕಯುಕ್ತ ಗೊಬ್ಬರ ಭೂಮಿಗೆ ಪೋಷಕಾಂಶವನ್ನು ನೀಡುವುದಿಲ್ಲ ಎಂದು ವಿಜ್ಞಾನ ಮತ್ತು ಸಾವಿರಾರು ವರ್ಷಗಳ ಜ್ಞಾನ ಒತ್ತಿ ಹೇಳಿದೆ. ಆದರೆ, ರಾಸಾಯನಿಕಗಳ ಬಳಕೆ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಗೋವು ಮಾತ್ರ ನಮ್ಮನ್ನು ಈ ಸಂಕಷ್ಟದಿಂದ ಪಾರುಮಾಡಬಲ್ಲದು. ಇದನ್ನು ಪ್ರತಿಯೊಂದು ಧರ್ಮ ಮತ್ತು ದೇಶದ ಜನರು ಅರ್ಥ ಮಾಡಿಕೊಳ್ಳಬೇಕು. ಭಾರತೀಯರು ಈಗಲಾದರೂ ಗೋ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.