ಬಾಲಾಕೋಟ್ ದಾಳಿಯ ರುವಾರಿ ಎಂದೇ ಗುರುತಿಸಿಕೊಂಡಿರುವ ಧನೋಆ, ‘ರಫೇಲ್ ಯುದ್ಧ ವಿಮಾನಗಳು ಹಾಗೂ ಎಸ್–400 ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು, ಶತ್ರುರಾಷ್ಟ್ರಗಳು ಮತ್ತೊಮ್ಮೆ ಯೋಚಿಸಲಿವೆ’ ಎಂದರು. ‘ಪಾಕಿಸ್ತಾನದ ವಿಚಾರಕ್ಕೆ ಬಂದರೆ, ರಫೇಲ್ ಹಾಗೂ ಎಸ್– 400 ಕ್ಷಿಪಣಿಗಳು ಪಾಕಿಸ್ತಾನದ ಯುದ್ಧವಿಮಾನಗಳನ್ನು ಪಾಕಿಸ್ತಾನದ ವಾಯುಪ್ರದೇಶದೊಳಗೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಫೆ.27ರಂದು ನಡೆದಿದ್ದ ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಭಾರತದ ಬಳಿ ರಫೇಲ್ ಇರುತ್ತಿದ್ದರೆ, ಪಾಕಿಸ್ತಾನಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.