<p><strong>ನವದೆಹಲಿ:</strong> ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದ ಶತ್ರುಗಳೊಂದಿಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎಂದು ಶನಿವಾರ ಆರೋಪಿಸಿರುವ ಬಿಜೆಪಿ, ‘ಅಂಥ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಅವರು ದೇಶದ ವಿರುದ್ಧ ಯಾವ ರೀತಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.</p>.<p>ಬರ್ಲಿನ್ನ ಹರ್ಟಿ ಶಾಲೆಯ ಅಧ್ಯಕ್ಷ ಕಾರ್ನೊಲ್ಲಿಯ ವೋಲ್ ಅವರ ಜೊತೆಗೆ ರಾಹುಲ್ ಇರುವ ಚಿತ್ರವನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು, ‘ನಮ್ಮ ಆರೋಪಕ್ಕೆ ಇದು ಪುರಾವೆ’ ಎಂದರು.</p>.<p>‘ಅಮೆರಿಕದ ಶತಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್ ಸೋರೊಸ್ ಅವರ ‘ಓಪನ್ ಸೊಸೈಟಿ ಪೌಂಢೇಷನ್’ನಿಂದ ಹಣಕಾಸಿನ ನೆರವು ಪಡೆಯುತ್ತಿರುವ ಸೆಂಟ್ರಲ್ ಯುರೋಪ್ ವಿಶ್ವವಿದ್ಯಾಲಯದ ಟ್ರಸ್ಟಿಗಳಲ್ಲಿ ಕಾರ್ನೊಲ್ಲಿಯ ಕೂಡ ಒಬ್ಬರು’ ಎಂದು ಗೌರವ್ ತಿಳಿಸಿದರು.</p>.<p>‘ಸೋರೊಸ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಹಾನಿಗೊಳಿಸಲು ಬೇಕಾದ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ಭಾರತದ ವಿರೋಧಿ ಶಕ್ತಿಗಳನ್ನು ಭೇಟಿ ಮಾಡಿ, ಭಾರತದ ಮಣ್ಣನ್ನು ಅವಮಾನಿಸುವ ವ್ಯಕ್ತಿ ಇದ್ದರೆ ಅದು ರಾಹುಲ್ ಮಾತ್ರ. ಜಾರ್ಜ್ ಸೋರೊಸ್ ಮತ್ತು ರಾಹುಲ್ ಎರಡು ದೇಹ, ಒಂದು ಆತ್ಮವಿದ್ದಂತೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದ ಶತ್ರುಗಳೊಂದಿಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎಂದು ಶನಿವಾರ ಆರೋಪಿಸಿರುವ ಬಿಜೆಪಿ, ‘ಅಂಥ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಅವರು ದೇಶದ ವಿರುದ್ಧ ಯಾವ ರೀತಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.</p>.<p>ಬರ್ಲಿನ್ನ ಹರ್ಟಿ ಶಾಲೆಯ ಅಧ್ಯಕ್ಷ ಕಾರ್ನೊಲ್ಲಿಯ ವೋಲ್ ಅವರ ಜೊತೆಗೆ ರಾಹುಲ್ ಇರುವ ಚಿತ್ರವನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು, ‘ನಮ್ಮ ಆರೋಪಕ್ಕೆ ಇದು ಪುರಾವೆ’ ಎಂದರು.</p>.<p>‘ಅಮೆರಿಕದ ಶತಕೋಟ್ಯಧಿಪತಿ ಹೂಡಿಕೆದಾರ ಜಾರ್ಜ್ ಸೋರೊಸ್ ಅವರ ‘ಓಪನ್ ಸೊಸೈಟಿ ಪೌಂಢೇಷನ್’ನಿಂದ ಹಣಕಾಸಿನ ನೆರವು ಪಡೆಯುತ್ತಿರುವ ಸೆಂಟ್ರಲ್ ಯುರೋಪ್ ವಿಶ್ವವಿದ್ಯಾಲಯದ ಟ್ರಸ್ಟಿಗಳಲ್ಲಿ ಕಾರ್ನೊಲ್ಲಿಯ ಕೂಡ ಒಬ್ಬರು’ ಎಂದು ಗೌರವ್ ತಿಳಿಸಿದರು.</p>.<p>‘ಸೋರೊಸ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಹಾನಿಗೊಳಿಸಲು ಬೇಕಾದ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.</p>.<p>‘ಭಾರತದ ವಿರೋಧಿ ಶಕ್ತಿಗಳನ್ನು ಭೇಟಿ ಮಾಡಿ, ಭಾರತದ ಮಣ್ಣನ್ನು ಅವಮಾನಿಸುವ ವ್ಯಕ್ತಿ ಇದ್ದರೆ ಅದು ರಾಹುಲ್ ಮಾತ್ರ. ಜಾರ್ಜ್ ಸೋರೊಸ್ ಮತ್ತು ರಾಹುಲ್ ಎರಡು ದೇಹ, ಒಂದು ಆತ್ಮವಿದ್ದಂತೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>