ನಾಯ್ಡು ಅವರು ಸದನದ ಉತ್ಪಾದಕತೆಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ‘ಸರ್ಕಾರವು ಪ್ರಸ್ತಾವಗಳನ್ನು ಇರಿಸಲು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಲು ಹಾಗೂ ಸದನದಲ್ಲಿ ಚರ್ಚೆಗಳು ನಡೆಯಲು ಅವಕಾಶ ನೀಡುವ ಮೂಲಕ ನಾಯ್ಡು ಅವರು ಸದನದ ತತ್ವಗಳನ್ನು ಪಾಲಿಸಿದ್ದಾರೆ’ ಎಂದು ಪ್ರಧಾನಿ ಹೇಳಿದ್ದಾರೆ.