ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ನಾನು ಬೆಂಗಳೂರಿನ ಹೋಟೆಲ್ನಲ್ಲಿ ತಂಗಿದ್ದೆ. ಅಲ್ಲಿ ನಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಕೆಲವು ಸಚಿವರು ಇರುವುದು ಗೊತ್ತಾಯಿತು. ಚಹಾ ಕುಡಿಯಲೆಂದು ಎಲ್ಲರೂ ಒಟ್ಟಿಗೆ ಸೇರಿದೆವು. ಆ ವೇಳೆ, ಬಿಬಿಎಂಪಿಯ ಅಧಿಕಾರಿಗಳು ಬಂದರು. ಅಲ್ಲಿ ನಾನು ಸಭೆ ನಡೆಸಿಲ್ಲ. ಆ ಅಧಿಕಾರವೂ ನನಗೆ ಇಲ್ಲ’ ಎಂದು ಹೇಳಿದರು.