<p><strong>ತಿರುವನಂತಪುರ</strong>: ಶಬರಿಮಲೆ ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಶಬರಿಮಲೆಯಲ್ಲಿ ‘ದರ್ಶನ’ದ ಮಾರ್ಗವನ್ನು ಬದಲಿಸಲು ನಿರ್ಧಾರ ತೆಗೆದುಕೊಂಡಿದೆ.</p>.<p>ಇದರಿಂದ ಭಕ್ತರಿಗೆ ಸನ್ನಿಧಾನಂ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಕೂಡಲೇ ನೇರವಾಗಿ ದರ್ಶನದ ಭಾಗ್ಯ ದೊರೆಯಲಿದೆ.</p>.<p>ಮಾರ್ಚ್ 15ರಿಂದ ಆರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ವಿಷು ಪೂಜಾ ಸಮಯದಲ್ಲೂ ಇದು ಮುಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಹೊಸ ವ್ಯವಸ್ಥೆಯು ಯಶಸ್ವಿಯಾದರೆ, ಮುಂದಿನ ಮಂಡಳ– ಮಕರವಿಳಕ್ಕು ಋತುವಿನಲ್ಲಿ ಇದನ್ನು ಶಾಶ್ವತಗೊಳಿಸಲಾಗುವುದು ಎಂದರು.</p>.<p>‘ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕವೂ ದರ್ಶನಕ್ಕೆ ದೀರ್ಘ ಸಮಯ ಕಾಯಬೇಕಾಗುತ್ತಿದೆ. ಆದರೆ, ದರ್ಶನಕ್ಕೆ ಸಿಗುತ್ತಿರುವುದು 5 ಸೆಕೆಂಡಿಗಿಂತ ಕಡಿಮೆ ಅವಧಿ. ಹೀಗಾಗಿ ಮಾರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿ ಸಹಸ್ರಾರು ಭಕ್ತರು ಪತ್ರ ಮೂಲಕ ಮನವಿಗಳನ್ನು ಮಾಡಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ಪ್ರಸ್ತುತ, 18 ಮೆಟ್ಟಿಲು ಹತ್ತಿದ ಬಳಿಕ ಭಕ್ತರು ದೇವಾಲಯದ ಸುತ್ತಲಿನ ಬ್ರಿಡ್ಜ್ನಲ್ಲಿನ ಸರದಿ ಸಾಲುಗಳಲ್ಲಿ ಸಾಗಬೇಕು. ಇದರಿಂದ ದರ್ಶನಕ್ಕೆ ದೊರೆಯುವ ಅವಧಿ ತೀರಾ ಕಡಿಮೆ. ಹೀಗಾಗಿ ಶೇ 80ಕ್ಕೂ ಹೆಚ್ಚು ಭಕ್ತರಿಗೆ ದರ್ಶನದ ತೃಪ್ತಿದಾಯಕ ಅನುಭವ ಆಗುತ್ತಿಲ್ಲ’ ಎಂದು ಅವರು ಹೇಳಿದರು.</p>.<p>ದೇವಾಲಯದ ತಂತ್ರಿಯಿಂದ ಅನುಮತಿ ಪಡೆದು, ಇತರ ಭಾಗಿದಾರರ ಜತೆಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಹೊಸ ವ್ಯವಸ್ಥೆಯಲ್ಲಿ ಪ್ರತಿ ಭಕ್ತರಿಗೂ ಸುಮಾರು 20ರಿಂದ 25 ಸೆಕೆಂಡ್ಗಳವರೆಗೆ ದರ್ಶನ ದೊರೆಯುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ಶಬರಿಮಲೆ ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಶಬರಿಮಲೆಯಲ್ಲಿ ‘ದರ್ಶನ’ದ ಮಾರ್ಗವನ್ನು ಬದಲಿಸಲು ನಿರ್ಧಾರ ತೆಗೆದುಕೊಂಡಿದೆ.</p>.<p>ಇದರಿಂದ ಭಕ್ತರಿಗೆ ಸನ್ನಿಧಾನಂ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಕೂಡಲೇ ನೇರವಾಗಿ ದರ್ಶನದ ಭಾಗ್ಯ ದೊರೆಯಲಿದೆ.</p>.<p>ಮಾರ್ಚ್ 15ರಿಂದ ಆರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ವಿಷು ಪೂಜಾ ಸಮಯದಲ್ಲೂ ಇದು ಮುಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಹೊಸ ವ್ಯವಸ್ಥೆಯು ಯಶಸ್ವಿಯಾದರೆ, ಮುಂದಿನ ಮಂಡಳ– ಮಕರವಿಳಕ್ಕು ಋತುವಿನಲ್ಲಿ ಇದನ್ನು ಶಾಶ್ವತಗೊಳಿಸಲಾಗುವುದು ಎಂದರು.</p>.<p>‘ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಬಳಿಕವೂ ದರ್ಶನಕ್ಕೆ ದೀರ್ಘ ಸಮಯ ಕಾಯಬೇಕಾಗುತ್ತಿದೆ. ಆದರೆ, ದರ್ಶನಕ್ಕೆ ಸಿಗುತ್ತಿರುವುದು 5 ಸೆಕೆಂಡಿಗಿಂತ ಕಡಿಮೆ ಅವಧಿ. ಹೀಗಾಗಿ ಮಾರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿ ಸಹಸ್ರಾರು ಭಕ್ತರು ಪತ್ರ ಮೂಲಕ ಮನವಿಗಳನ್ನು ಮಾಡಿದ್ದಾರೆ’ ಎಂದು ಅವರು ವಿವರಿಸಿದರು.</p>.<p>‘ಪ್ರಸ್ತುತ, 18 ಮೆಟ್ಟಿಲು ಹತ್ತಿದ ಬಳಿಕ ಭಕ್ತರು ದೇವಾಲಯದ ಸುತ್ತಲಿನ ಬ್ರಿಡ್ಜ್ನಲ್ಲಿನ ಸರದಿ ಸಾಲುಗಳಲ್ಲಿ ಸಾಗಬೇಕು. ಇದರಿಂದ ದರ್ಶನಕ್ಕೆ ದೊರೆಯುವ ಅವಧಿ ತೀರಾ ಕಡಿಮೆ. ಹೀಗಾಗಿ ಶೇ 80ಕ್ಕೂ ಹೆಚ್ಚು ಭಕ್ತರಿಗೆ ದರ್ಶನದ ತೃಪ್ತಿದಾಯಕ ಅನುಭವ ಆಗುತ್ತಿಲ್ಲ’ ಎಂದು ಅವರು ಹೇಳಿದರು.</p>.<p>ದೇವಾಲಯದ ತಂತ್ರಿಯಿಂದ ಅನುಮತಿ ಪಡೆದು, ಇತರ ಭಾಗಿದಾರರ ಜತೆಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಹೊಸ ವ್ಯವಸ್ಥೆಯಲ್ಲಿ ಪ್ರತಿ ಭಕ್ತರಿಗೂ ಸುಮಾರು 20ರಿಂದ 25 ಸೆಕೆಂಡ್ಗಳವರೆಗೆ ದರ್ಶನ ದೊರೆಯುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>