<p><strong>ಜೈಪುರ:</strong> ‘ರಾಜ್ಯ ವಿಧಾನಸಭಾ ಚುನಾವಣೆಯು ಸಮೀಪದಲ್ಲಿದ್ದು, ಜನರ ಮಧ್ಯೆ ತೆರಳಿ ಅವರ ಮಾತುಗಳನ್ನು ಆಲಿಸಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಶನಿವಾರ ಕರೆ ನೀಡಿದ್ದಾರೆ. </p>.<p>ಪೈಲಟ್ ಅವರು ಹಿಂದಿನ ದಿನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರನ್ನೂ ಭೇಟಿಯಾದರು.</p>.<p>ರಾಜಸ್ಥಾನ ಕಾಂಗ್ರೆಸ್ನಲ್ಲಿ ಈ ವಾರ ಬದಲಾವಣೆಗಳಾಗಿದ್ದು, ವಾರದ ಆರಂಭದಲ್ಲಿ ಪಕ್ಷವು ಅಮೃತಾ ಧವನ್ ಮತ್ತು ವೀರೇಂದ್ರ ಸಿಂಗ್ ರಾಥೋಡ್ ಅವರನ್ನು ರಾಜಸ್ಥಾನದ ಎಐಸಿಸಿ ಸಹ- ಪ್ರಭಾರಿಯಾಗಿ ನೇಮಿಸಿದೆ. ಅಂತೆಯೇ ಸುಖಜಿಂದರ್ ಸಿಂಗ್ ರಾಂಧವಾ ಅವರು ರಾಜ್ಯದ ಉಸ್ತುವಾರಿಯಾಗಿ ಉಳಿದಿದ್ದಾರೆ.</p>.<p>‘ಸಂಘಟನೆಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಎಐಸಿಸಿ ಪ್ರತಿನಿಧಿಗಳಾಗಲಿ, ಪಕ್ಷ ಸಂಘಟನೆಯ ಕೆಲಸ ನಿರ್ವಹಿಸುವವರಾಗಲಿ, ನಾವೆಲ್ಲರೂ ಜನರ ಜತೆಗೆ ಬೆರೆತು ಅವರ ಭಾವನೆಗಳನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.</p>.<p>ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ ಸಚಿನ್, ‘ಬಿಜೆಪಿ ತನ್ನ ಸಂಸದರನ್ನು ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.</p>.<p>‘ಈ ಯುವಕರು ಪದಕಗಳನ್ನು ತಂದು ದೇಶವೇ ಹೆಮ್ಮೆ ಪಡುವಂತೆ ಮಾಡಿದಾಗ ಎಲ್ಲರೂ ಅವರ ಜೊತೆ ನಿಂತು ಯಶಸ್ಸನ್ನು ಹಂಚಿಕೊಳ್ಳುತ್ತಿದ್ದರು.ಆದರೆ ಇಂದು ಸಂಕಷ್ಟಕ್ಕೆ ಸಿಲುಕಿ ಗಂಭೀರ ಆರೋಪ ಮಾಡುತ್ತಿರುವಾಗ ಸರ್ಕಾರವು ನುಣುಚಿಕೊಂಡಿದೆ’ ಎಂದು ದೂರಿದರು.</p>.<p>ಕರ್ನಾಟಕದ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿದ ಪೈಲಟ್, ‘ರಾಜಕಾರಣದಲ್ಲಿ ಇಂಥ ಟೀಕೆಗಳು ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> ‘ರಾಜ್ಯ ವಿಧಾನಸಭಾ ಚುನಾವಣೆಯು ಸಮೀಪದಲ್ಲಿದ್ದು, ಜನರ ಮಧ್ಯೆ ತೆರಳಿ ಅವರ ಮಾತುಗಳನ್ನು ಆಲಿಸಬೇಕು’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಶನಿವಾರ ಕರೆ ನೀಡಿದ್ದಾರೆ. </p>.<p>ಪೈಲಟ್ ಅವರು ಹಿಂದಿನ ದಿನ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರನ್ನೂ ಭೇಟಿಯಾದರು.</p>.<p>ರಾಜಸ್ಥಾನ ಕಾಂಗ್ರೆಸ್ನಲ್ಲಿ ಈ ವಾರ ಬದಲಾವಣೆಗಳಾಗಿದ್ದು, ವಾರದ ಆರಂಭದಲ್ಲಿ ಪಕ್ಷವು ಅಮೃತಾ ಧವನ್ ಮತ್ತು ವೀರೇಂದ್ರ ಸಿಂಗ್ ರಾಥೋಡ್ ಅವರನ್ನು ರಾಜಸ್ಥಾನದ ಎಐಸಿಸಿ ಸಹ- ಪ್ರಭಾರಿಯಾಗಿ ನೇಮಿಸಿದೆ. ಅಂತೆಯೇ ಸುಖಜಿಂದರ್ ಸಿಂಗ್ ರಾಂಧವಾ ಅವರು ರಾಜ್ಯದ ಉಸ್ತುವಾರಿಯಾಗಿ ಉಳಿದಿದ್ದಾರೆ.</p>.<p>‘ಸಂಘಟನೆಯಲ್ಲಿ ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಿರುತ್ತವೆ. ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಎಐಸಿಸಿ ಪ್ರತಿನಿಧಿಗಳಾಗಲಿ, ಪಕ್ಷ ಸಂಘಟನೆಯ ಕೆಲಸ ನಿರ್ವಹಿಸುವವರಾಗಲಿ, ನಾವೆಲ್ಲರೂ ಜನರ ಜತೆಗೆ ಬೆರೆತು ಅವರ ಭಾವನೆಗಳನ್ನು ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.</p>.<p>ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ ಸಚಿನ್, ‘ಬಿಜೆಪಿ ತನ್ನ ಸಂಸದರನ್ನು ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.</p>.<p>‘ಈ ಯುವಕರು ಪದಕಗಳನ್ನು ತಂದು ದೇಶವೇ ಹೆಮ್ಮೆ ಪಡುವಂತೆ ಮಾಡಿದಾಗ ಎಲ್ಲರೂ ಅವರ ಜೊತೆ ನಿಂತು ಯಶಸ್ಸನ್ನು ಹಂಚಿಕೊಳ್ಳುತ್ತಿದ್ದರು.ಆದರೆ ಇಂದು ಸಂಕಷ್ಟಕ್ಕೆ ಸಿಲುಕಿ ಗಂಭೀರ ಆರೋಪ ಮಾಡುತ್ತಿರುವಾಗ ಸರ್ಕಾರವು ನುಣುಚಿಕೊಂಡಿದೆ’ ಎಂದು ದೂರಿದರು.</p>.<p>ಕರ್ನಾಟಕದ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿದ ಪೈಲಟ್, ‘ರಾಜಕಾರಣದಲ್ಲಿ ಇಂಥ ಟೀಕೆಗಳು ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>