ಮಾರ್ಚ್ 19ರಂದು ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ– ಶರದ್ಚಂದ್ರ ಪವಾರ್’ ಎಂಬ ಹೆಸರು ಮತ್ತು ‘ತುತ್ತೂರಿ ಊದುತ್ತಿರುವ ಪುರುಷ’ನ ಚಿಹ್ನೆಯನ್ನು ಮಾತ್ರ ಚುನಾವಣಾ ಪ್ರಚಾರದಲ್ಲಿ ಬಳಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿಕೊಡಬೇಕು ಎಂದು ಶರದ್ ಬಣಕ್ಕೆ ಹೇಳಿತ್ತು. ಇದೇ ವೇಳೆ, ಗಡಿಯಾರ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಿರುವ ಕುರಿತು ಸುದ್ದಿಪತ್ರಿಕೆಗಳಲ್ಲಿ ಎದ್ದುಕಾಣುವ ರೀತಿ ಜಾಹೀರಾತು ಪ್ರಕಟಿಸಬೇಕು. ಅದರೊಟ್ಟಿಗೆ ಇದೇ ಚಿಹ್ನೆ ಎನ್ನುವುದರ ಕುರಿತ ಒಕ್ಕಣೆಯೂ ದೊಡ್ಡದಾಗಿ ಕಾಣಬೇಕು ಎಂದು ಅಜಿತ್ ಪವಾರ್ ಬಣಕ್ಕೆ ಹೇಳಿತ್ತು.