ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್ನಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎನ್. ವೆಂಕಟರಮಣ್ ಅವರು, ‘ಕೇರಳದ ಆಯವ್ಯಯದ ಮೇಲೆ ಆಫ್ಸೆಟ್ ಬ್ಯಾಲೆನ್ಸ್ (ಸಾಲ ಪಡೆಯುವವರು ಬ್ಯಾಂಕ್ ಖಾತೆಯಲ್ಲಿ ಇರಿಸಿಕೊಂಡಿರಬೇಕಾದ ಕನಿಷ್ಠ ಠೇವಣಿ) ಗುರುತರ ಪರಿಣಾಮ ಬೀರುತ್ತದೆ. ರಾಜ್ಯವು ಈಗಾಗಲೇ ಎರಡು ಬಾರಿ ಹಣಕಾಸು ಕ್ರೋಢೀಕರಣವನ್ನು ಮುಂದೂಡಿದೆ. ಈ ಕಾರಣದಿಂದಾಗಿ ನೆರವು ನೀಡುವ ವಿಚಾರದಲ್ಲಿ ನಮ್ಮ ಕೈ ಕಟ್ಟಿಹಾಕಿದಂತಾಗಿದೆ’ ಎಂದರು.