ಕೇಂದ್ರ ಸಚಿವರು ಬೆದರಿಕೆ ಒಡ್ಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬೈನಲ್ಲಿನ ‘ಸುಲಿಗೆ ವ್ಯವಸ್ಥೆ’ಯನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ರಾವತ್, ರಾಣೆಗೆ ಸೂಕ್ಷ್ಮ ಎಚ್ಚರಿಕೆ ನೀಡಿದರು. ‘ರಾಣೆ ನಮ್ಮ ಜಾತಕ ಅವರ ಬಳಿ ಇದೆ ಎಂದು ಬೆದರಿಕೆಯೊಡ್ಡುತ್ತಿರಬಹುದು. ನಮ್ಮ ಬಳಿಯೂ ಅವರ ಜಾತಕವಿದೆ’ ಎಂದು ರಾವತ್ ತಿರುಗೇಟು ನೀಡಿದರು.