ಜುಲೈ 2ರಂದು ಕಾಲೇಜು ಸೇರಿದ್ದ ಸುರೇಶ್, ಮೂರು ದಿನ ತರಗತಿಗೆ ಹಾಜರಾಗಿದ್ದರು. ರಾಜಂ ಎಂಬಲ್ಲಿನ ತಮ್ಮ ಸಂಬಂಧಿಕರ ಮನೆಯಿಂದ ಬಸ್ನಲ್ಲಿ ಬಂದಿದ್ದ ಸುರೇಶ್, ಬದ್ರಿಪ್ರಸಾದ್ ಕಾಲೊನಿಯಲ್ಲಿ ಇಳಿದಿದ್ದಾರೆ. ತರಗತಿಗೆ ತಡವಾಗುತ್ತದೆ ಎಂಬ ಕಾರಣಕ್ಕೆ ರೈಲು ಹಳಿ ದಾಟಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಶೂ ಹಳಿಯ ಕೆಳಗೆ ಸಿಲುಕೊಂಡಿದೆ. ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರಾದರೂ, ಅಷ್ಟರಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಸುರೇಶ್ ಮೇಲೆ ಹರಿದಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.