ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಅವರ ಸಮಾಧಿ ಇರುವ ‘ಶಾಂತಿ ವನ’ ಮತ್ತು ಲಾಲ್ಬಹದ್ದೂರ್ ಶಾಸ್ತ್ರಿ ಅವರ ಸಮಾಧಿ ಇರುವ ‘ವಿಜಯ್ ಘಾಟ್’ ನಡುವಿನ ಹಸಿರು ಪರಿಸರದಲ್ಲಿನ ಎತ್ತರದ ಸ್ಥಳದಲ್ಲಿ ಬಿಜೆಪಿಯ ನಾಯಕ ವಾಜಪೇಯಿ ಅವರ ಅಂತ್ಯಕ್ರಿಯೆ ನಡೆಯಲಿದೆ. ರಾಜ್ಘಾಟ್ ಸಮೀಪದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ರಾಷ್ಟ್ರ ನಾಯಕರ ಅಂತ್ಯಕ್ರಿಯೆ ನಡೆಸಲು ನಿಯಮವೊಂದನ್ನು ರೂಪಿಸಿ ಕೇಂದ್ರ ಸಚಿವ ಸಂಪುಟ 2013ರಲ್ಲಿ ಅನುಮೋದನೆ ನೀಡಿದೆ.