<p><strong>ಆಲಪ್ಪುಳ/ಕೊಟ್ಟಾಯಂ:</strong> ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್ಎನ್ಡಿಪಿ) ಜೊತೆಗಿನ ಮೈತ್ರಿಯಿಂದ ಹೊರ ನಡೆಯುವುದಾಗಿ ನಾಯರ್ ಸರ್ವೀಸ್ ಸೊಸೈಟಿ(ಎನ್ಎಸ್ಎಸ್) ನಿರ್ಧಾರ ಕೈಗೊಂಡಿರುವುದದಕ್ಕೆ ಎಸ್ಎನ್ಡಿಪಿ ನಾಯಕ ವೇಲಪ್ಪಳ್ಳಿ ನಟೇಶನ್ ಅವರು ಬೇಸರ ವ್ಯಕ್ತಪಡಿಸಿದರು.</p>.<p>‘ನನ್ನ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ಎರಡು ಸಂಘಟನೆ ನಡುವಣ ಐಕ್ಯತೆಯನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ. ಎಸ್ಎನ್ಡಿಪಿಯನ್ನು ಮುಸ್ಲಿಂ ವಿರೋಧಿಯನ್ನಾಗಿ ಬಿಂಬಿಸುವ ಯತ್ನಗಳೂ ನಡೆದಿವೆ’ ಎಂದು ಎಂದು ಅವರು ಬುಧವಾರ ಆರೋಪಿಸಿದರು.</p>.<p>ಎನ್ಎಸ್ಎಸ್ ಸಂಘಟನೆಯು ನಾಯರ್ ಸಮುದಾಯವನ್ನು ಪ್ರತಿನಿಧಿಸಿದರೆ, ಎಸ್ಎನ್ಡಿಪಿಯು ಈಳವ ಸಮುದಾಯವನ್ನು ಪ್ರತಿನಿಧಿಸುತ್ತದೆ. </p>.<p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟೇಶನ್ ಅವರು, ‘ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್ ಅವರು ಮುಗ್ಧರು, ಸಭ್ಯರು ಮತ್ತು ನಿಸ್ವಾರ್ಥಿ. ಒತ್ತಡಕ್ಕೆ ಒಳಗಾಗಿ ಅವರು ಮೈತ್ರಿಯಿಂದ ಹೊರ ನಡೆದಿದ್ದಾರೆ’ ಎಂದು ಹೇಳಿದರು.</p>.<p>‘ಇದಕ್ಕಾಗಿ ವ್ಯಥೆ ಪಡುವುದೂ ಇಲ್ಲ ಅಥವಾ ಪ್ರತಿಭಟನೆ ನಡೆಸುವುದೂ ಇಲ್ಲ. ನಾಯರ್ ಸಮುದಾಯವೂ ಸಹೋದರ ಸಮುದಾಯ. ಎನ್ಎಸ್ಎಸ್ ಮತ್ತು ಅದರ ನಾಯಕರನ್ನು ಟೀಕಿಸಬೇಡಿ’ ಎಂದು ಎಸ್ಎನ್ಡಿಪಿ ಸದಸ್ಯರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಪ್ಪುಳ/ಕೊಟ್ಟಾಯಂ:</strong> ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್ಎನ್ಡಿಪಿ) ಜೊತೆಗಿನ ಮೈತ್ರಿಯಿಂದ ಹೊರ ನಡೆಯುವುದಾಗಿ ನಾಯರ್ ಸರ್ವೀಸ್ ಸೊಸೈಟಿ(ಎನ್ಎಸ್ಎಸ್) ನಿರ್ಧಾರ ಕೈಗೊಂಡಿರುವುದದಕ್ಕೆ ಎಸ್ಎನ್ಡಿಪಿ ನಾಯಕ ವೇಲಪ್ಪಳ್ಳಿ ನಟೇಶನ್ ಅವರು ಬೇಸರ ವ್ಯಕ್ತಪಡಿಸಿದರು.</p>.<p>‘ನನ್ನ ಕೆಲವು ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿ ಎರಡು ಸಂಘಟನೆ ನಡುವಣ ಐಕ್ಯತೆಯನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ. ಎಸ್ಎನ್ಡಿಪಿಯನ್ನು ಮುಸ್ಲಿಂ ವಿರೋಧಿಯನ್ನಾಗಿ ಬಿಂಬಿಸುವ ಯತ್ನಗಳೂ ನಡೆದಿವೆ’ ಎಂದು ಎಂದು ಅವರು ಬುಧವಾರ ಆರೋಪಿಸಿದರು.</p>.<p>ಎನ್ಎಸ್ಎಸ್ ಸಂಘಟನೆಯು ನಾಯರ್ ಸಮುದಾಯವನ್ನು ಪ್ರತಿನಿಧಿಸಿದರೆ, ಎಸ್ಎನ್ಡಿಪಿಯು ಈಳವ ಸಮುದಾಯವನ್ನು ಪ್ರತಿನಿಧಿಸುತ್ತದೆ. </p>.<p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟೇಶನ್ ಅವರು, ‘ಎನ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್ ಅವರು ಮುಗ್ಧರು, ಸಭ್ಯರು ಮತ್ತು ನಿಸ್ವಾರ್ಥಿ. ಒತ್ತಡಕ್ಕೆ ಒಳಗಾಗಿ ಅವರು ಮೈತ್ರಿಯಿಂದ ಹೊರ ನಡೆದಿದ್ದಾರೆ’ ಎಂದು ಹೇಳಿದರು.</p>.<p>‘ಇದಕ್ಕಾಗಿ ವ್ಯಥೆ ಪಡುವುದೂ ಇಲ್ಲ ಅಥವಾ ಪ್ರತಿಭಟನೆ ನಡೆಸುವುದೂ ಇಲ್ಲ. ನಾಯರ್ ಸಮುದಾಯವೂ ಸಹೋದರ ಸಮುದಾಯ. ಎನ್ಎಸ್ಎಸ್ ಮತ್ತು ಅದರ ನಾಯಕರನ್ನು ಟೀಕಿಸಬೇಡಿ’ ಎಂದು ಎಸ್ಎನ್ಡಿಪಿ ಸದಸ್ಯರಿಗೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>