<p><strong>ಶ್ರೀಶೈಲ(ಆಂಧ್ರಪ್ರದೇಶ)</strong>: ದೇವಸ್ಥಾನದಲ್ಲಿ ವಿತರಿಸುವ ಲಾಡು ಪ್ರಸಾದದಲ್ಲಿ ಕೀಟ ಬಂದಿದೆ ಎಂಬ ಆರೋಪಗಳನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಮಂಗಳವಾರ ತಳ್ಳಿ ಹಾಕಿದೆ.</p>.<p>‘ಜೂನ್ 29ರಂದು ದೇವಸ್ಥಾನದ ಕೌಂಟರ್ವೊಂದರಲ್ಲಿ ಪಡೆದಿದ್ದ ಲಾಡು ಪ್ರಸಾದದಲ್ಲಿ ಕೀಟ ಕಂಡುಬಂದಿತ್ತು’ ಎಂದು ಕೆಲ ಭಕ್ತರು ಆರೋಪಿಸಿದ್ದರು. ಈ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ನಂತರ ಭಕ್ತರು ಆತಂಕ ವ್ಯಕ್ತಪಡಿಸಿದ್ದರಿಂದ ದೇವಸ್ಥಾನದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.</p>.<p>‘ಲಾಡು ಪ್ರಸಾದದಲ್ಲಿ ಇದ್ದದ್ದು ಮಿಡತೆಯೇ ಹೊರತು ಜಿರಲೆ ಅಲ್ಲ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ. ಅದಾಗಲೇ ಚೂರಾಗಿದ್ದ ಲಾಡುವಿನಲ್ಲಿ ಮಿಡತೆಯನ್ನು ಉದ್ದೇಶಪೂರ್ವಕವಾಗಿ ಸೇರಿಸಿರುವಂತಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶ್ರೀನಿವಾಸರಾವ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀಶೈಲ(ಆಂಧ್ರಪ್ರದೇಶ)</strong>: ದೇವಸ್ಥಾನದಲ್ಲಿ ವಿತರಿಸುವ ಲಾಡು ಪ್ರಸಾದದಲ್ಲಿ ಕೀಟ ಬಂದಿದೆ ಎಂಬ ಆರೋಪಗಳನ್ನು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಮಂಗಳವಾರ ತಳ್ಳಿ ಹಾಕಿದೆ.</p>.<p>‘ಜೂನ್ 29ರಂದು ದೇವಸ್ಥಾನದ ಕೌಂಟರ್ವೊಂದರಲ್ಲಿ ಪಡೆದಿದ್ದ ಲಾಡು ಪ್ರಸಾದದಲ್ಲಿ ಕೀಟ ಕಂಡುಬಂದಿತ್ತು’ ಎಂದು ಕೆಲ ಭಕ್ತರು ಆರೋಪಿಸಿದ್ದರು. ಈ ಕುರಿತು ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಗೊಂಡ ನಂತರ ಭಕ್ತರು ಆತಂಕ ವ್ಯಕ್ತಪಡಿಸಿದ್ದರಿಂದ ದೇವಸ್ಥಾನದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.</p>.<p>‘ಲಾಡು ಪ್ರಸಾದದಲ್ಲಿ ಇದ್ದದ್ದು ಮಿಡತೆಯೇ ಹೊರತು ಜಿರಲೆ ಅಲ್ಲ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ. ಅದಾಗಲೇ ಚೂರಾಗಿದ್ದ ಲಾಡುವಿನಲ್ಲಿ ಮಿಡತೆಯನ್ನು ಉದ್ದೇಶಪೂರ್ವಕವಾಗಿ ಸೇರಿಸಿರುವಂತಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶ್ರೀನಿವಾಸರಾವ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>