ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Srisailam

ADVERTISEMENT

ಮರಗಾಲಿನಲ್ಲಿ 500 ಕಿ.ಮೀ. ಪಯಣ: ಮಲ್ಲಯ್ಯನ ದರ್ಶನಕ್ಕೆ ಭಕ್ತರ ಪಾದಯಾತ್ರೆ

Last Updated 10 ಮಾರ್ಚ್ 2023, 15:40 IST
fallback

ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ಅರಣ್ಯ ಭೂಮಿ: ಆಂಧ್ರ ಸಚಿವ 

‘ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ವಿವಾದಿತ ಅರಣ್ಯ ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಆಂಧ್ರಪ್ರದೇಶದ ಮುಜರಾಯಿ ಸಚಿವ ಕೊಟ್ಟು ಸತ್ಯನಾರಾಯಣ ಅವರು ಶನಿವಾರ ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2023, 16:29 IST
ಶ್ರೀಶೈಲ ದೇವಸ್ಥಾನಕ್ಕೆ 4,700 ಎಕರೆ ಅರಣ್ಯ ಭೂಮಿ: ಆಂಧ್ರ ಸಚಿವ 

ಶ್ರೀಶೈಲದಲ್ಲಿ ಕರ್ನಾಟಕ ಬಸ್‌ ಚಾಲಕನ ಮೇಲೆ ಹಲ್ಲೆ

‘ರಾತ್ರಿ 8ಕ್ಕೆ ಶ್ರೀಶೈಲ ತಲುಪಿದ ನಂತರ ಎಂದಿನಂತೆ ಅದೇ ಸ್ಥಳದಲ್ಲಿ ಬಸ್ ನಿಲ್ಲಿಸಿ, ಸ್ನಾನ ಮುಗಿಸಿ, ಊಟ ಮಾಡಿ ಮಲಗಿದ್ದೆವು. ಮಧ್ಯರಾತ್ರಿ 1 ಗಂಟೆಗೆ ಬಸ್ ಮೇಲೆ ಕಲ್ಲು ಬೀಸಿದ ಸದ್ದಾಯಿತು. ಮಠದ ಬಂಡೆ ಮೇಲೆ ಮಲಗಿದ್ದವನಿಗೆ ಎಚ್ಚರವಾಯಿತು. ಗಲಾಟೆ ತಡೆಯಲು ಪ್ರಯತ್ನಿಸಿದಾಗ, ಯುವಕರ ಗುಂಪು ಕಾಲಿನ ಮೇಲೆ ಕಲ್ಲು ಬೀಸಾಡಿ, ಹಲ್ಲೆ ಮಾಡಿದರು‘ ಎಂದು ಚಾಲಕ ಘಟನೆ ಬಗ್ಗೆ ತಿಳಿಸಿದ್ದಾರೆ.
Last Updated 3 ಜೂನ್ 2022, 16:38 IST
ಶ್ರೀಶೈಲದಲ್ಲಿ ಕರ್ನಾಟಕ ಬಸ್‌ ಚಾಲಕನ ಮೇಲೆ ಹಲ್ಲೆ

ಪ್ರಕ್ಷುಬ್ಧಗೊಂಡಿದ್ದ ಶ್ರೀಶೈಲ ಸಹಜ ಸ್ಥಿತಿಯತ್ತ

ಭಕ್ತರು, ಸ್ಥಳೀಯರ ಘರ್ಷಣೆಯಿಂದ ಪ್ರಕ್ಷುಬ್ಧಗೊಂಡಿದ್ದ ಶ್ರೀಕ್ಷೇತ್ರ
Last Updated 1 ಏಪ್ರಿಲ್ 2022, 17:41 IST
ಪ್ರಕ್ಷುಬ್ಧಗೊಂಡಿದ್ದ ಶ್ರೀಶೈಲ ಸಹಜ ಸ್ಥಿತಿಯತ್ತ

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಗಲಭೆ: ಶ್ರೀಶೈಲದಲ್ಲಿ ನಿಷೇಧಾಜ್ಞೆ

ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಕರ್ನಾಟಕದ ಯಾತ್ರಾರ್ಥಿಗಳು, ಸ್ಥಳೀಯರ ಜಗಳ
Last Updated 31 ಮಾರ್ಚ್ 2022, 18:43 IST
ನೀರಿನ ಬಾಟಲಿ ಬೆಲೆ ವಿಚಾರಕ್ಕೆ ಗಲಭೆ:  ಶ್ರೀಶೈಲದಲ್ಲಿ ನಿಷೇಧಾಜ್ಞೆ

ಕರ್ನಾಟಕದ ಭಕ್ತರು ಸುರಕ್ಷಿತ: ಶ್ರೀಶೈಲ ಶ್ರೀ

ಶ್ರೀಶೈಲದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಅಂಗಡಿ ಮುಂಗಟ್ಟು ತೆರೆದ ವ್ಯಾ‍ಪಾರಿಗಳು
Last Updated 31 ಮಾರ್ಚ್ 2022, 17:40 IST
ಕರ್ನಾಟಕದ ಭಕ್ತರು ಸುರಕ್ಷಿತ: ಶ್ರೀಶೈಲ ಶ್ರೀ

ಕರ್ನಾಟಕದ ಭಕ್ತರು ಸುರಕ್ಷಿತವಾಗಿದ್ದಾರೆ: ಶ್ರೀಶೈಲ ಶ್ರೀ

ಗುರುವಾರ ವಿಡಿಯೋ ಸಂದೇಶ ನೀಡಿರುವ ಅವರು, ‘ಬುಧವಾರ ರಾತ್ರಿ ಅಂಗಡಿಯೊಂದರಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಕರ್ನಾಟಕದ ಭಕ್ತನ ಮೇಲೆ ಹಲ್ಲೆಯಾಗಿದೆ. ಆದರೆ, ಕರ್ನಾಟಕದ ಭಕ್ತ ಮೃತಪಟ್ಟಿದ್ದಾನೆ ಎಂದು ಸುದ್ದಿ ಹರಡಿದ್ದರಿಂದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಮಧ್ಯಪ್ರವೇಶಿಸಿ ಎಲ್ಲರಿಗೂ ಶಾಂತಿಯಿಂದ ಇರಲು ಹೇಳಲಾಗಿದೆ‘ ಎಂದು ತಿಳಿಸಿದ್ದಾರೆ.
Last Updated 31 ಮಾರ್ಚ್ 2022, 13:04 IST
ಕರ್ನಾಟಕದ ಭಕ್ತರು ಸುರಕ್ಷಿತವಾಗಿದ್ದಾರೆ: ಶ್ರೀಶೈಲ ಶ್ರೀ
ADVERTISEMENT

ರಾತ್ರೋರಾತ್ರಿ ಶ್ರೀಶೈಲದಿಂದ ಲಕ್ಷಾಂತರ ಭಕ್ತರು ವಾಪಸ್‌

‘ವಾಹನಗಳನ್ನು ಧ್ವಂಸ ಮಾಡಿರುವ ಘಟನೆಯಿಂದ ಭಕ್ತರು ಭಯಗೊಂಡಿದ್ದರು. ಅಂಗಡಿ ಮುಗ್ಗಟ್ಟುಗಳನ್ನೆಲ್ಲ ಮುಚ್ಚಿದ್ದರಿಂದ ನೀರು, ಆಹಾರದ ಸಮಸ್ಯೆ ಆಗುತ್ತದೆ ಎಂದು ಸ್ವಂತ ವಾಹನಗಳಲ್ಲಿ ಬಂದಿದ್ದ ಲಕ್ಷಾಂತರ ಭಕ್ತರು ಜಾಗ ಖಾಲಿ ಮಾಡಿದ್ದಾರೆ‘ ಎಂದು ವಿಜಯಪುರ ಜಿಲ್ಲೆ ಬಬಲೇಶ್ವರ ಭಕ್ತ ಶಂಕರಯ್ಯ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.
Last Updated 31 ಮಾರ್ಚ್ 2022, 10:18 IST
ರಾತ್ರೋರಾತ್ರಿ ಶ್ರೀಶೈಲದಿಂದ ಲಕ್ಷಾಂತರ ಭಕ್ತರು ವಾಪಸ್‌

ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಬೊಮ್ಮಾಯಿ

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಂತಿ ಮತ್ತು ಪ್ರಗತಿಗೆ ಕರ್ನಾಟಕ ಹೆಸರುವಾಸಿ. ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
Last Updated 31 ಮಾರ್ಚ್ 2022, 10:12 IST
ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಬೊಮ್ಮಾಯಿ

ಸರ್ಕಾರ ರಾಜ್ಯದ ಭಕ್ತರಿಗೆ ರಕ್ಷಣೆ ನೀಡಬೇಕು: ಸುಲಫಲ ಶ್ರೀ

ಯುಗಾದಿ ಮಹೋತ್ಸವದ ಅಂಗವಾಗಿ ಶ್ರೀಶೈಲದ ಮಠದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿರುವ ಸ್ವಾಮೀಜಿ ’ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇಂತಹ ಘಟನೆಗಳಿಂದ, ತಿಂಗಳಾನುಗಟ್ಟಲೇ ಕಾಲ್ನಡಿಗೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆಯಲು ಬಂದಿರುವ ರಾಜ್ಯದ ಭಕ್ತರಿಗೆ ಆತಂಕವುಂಟಾಗುತ್ತದೆ. ಶ್ರೀಶೈಲಯದಲ್ಲಿ ಸುಮಾರು 25 ಲಕ್ಷ ಜನರು ಬೀಡುಬಿಟ್ಟಿದ್ದು, ಅವರನ್ನು ವಾಪಸ್ ಹೋಗು ಎಂದರೆ ತಕ್ಷಣಕ್ಕೆ ಹೋಗುವುದು ಅಸಾಧ್ಯ. ಸದ್ಯಕ್ಕೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆಂಧ್ರಪ್ರದೇಶ ಸರ್ಕಾರ ಅಗತ್ಯಬಿದ್ದರೆ ಭದ್ರತೆಗಾಗಿ ಮಿಲಿಟರಿಯನ್ನು ಕರೆಸಬೇಕು. ರಾಜ್ಯದ ಭಕ್ತರಿಗೆ ನಮ್ಮ ಮಠದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆಯಿಂದ ಎಂಟು ಕ್ವಿಂಟಲ್ ಅಕ್ಕಿ ಖರ್ಚಾಗಿದೆ’ ಎಂದರು.
Last Updated 31 ಮಾರ್ಚ್ 2022, 10:02 IST
ಸರ್ಕಾರ ರಾಜ್ಯದ ಭಕ್ತರಿಗೆ ರಕ್ಷಣೆ ನೀಡಬೇಕು: ಸುಲಫಲ ಶ್ರೀ
ADVERTISEMENT
ADVERTISEMENT
ADVERTISEMENT