<p><strong>ಜೈಪುರ</strong>: ಲೋಕಸಭಾ ಚುನಾವಣೆ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿ ತೋರಿದ ‘ದುರಹಂಕಾರ’ ಮತ್ತು ಇಂಡಿಯಾ ಮೈತ್ರಿಕೂಟದ ‘ರಾಮ ವಿರೋಧಿ’ ಧೋರಣೆಯನ್ನು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು ಟೀಕಿಸಿದ್ದಾರೆ. </p>.<p>ಜೈಪುರ ಸಮೀಪದ ಕಾನೋತಾದಲ್ಲಿ ಆಯೋಜಿಸಿದ್ದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ್ ಪೂಜಾ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಸರು ಹೇಳದೆಯೇ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಧೋರಣೆಯನ್ನು ದೂರಿದರು. ಲೋಕಸಭಾ ಚುನಾವಣಾ ಫಲಿತಾಂಶವು ಈ ಪಕ್ಷಗಳ ವರ್ತನೆಯನ್ನು ಪ್ರತಿಬಿಂಬಿಸುತ್ತವೆ ಎಂದರು. </p>.<p>‘ಶ್ರೀರಾಮನ ಮೇಲೆ ಭಕ್ತಿ ತೋರಿದ, ಆದರೆ ‘ದುರಹಂಕಾರಿ’ಯಾದ ಪಕ್ಷವನ್ನು ರಾಮನು 241 ಸ್ಥಾನಗಳಲ್ಲಿ ನಿಲ್ಲಿಸಿದ. ಆ ಪಕ್ಷಕ್ಕೆ ಅತಿಹೆಚ್ಚು ಸ್ಥಾನಗಳು ಸಿಗುವಂತೆ ಮಾಡಿದ’ ಎಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದರು.</p>.<p>‘ಆದರೆ, ರಾಮನ ಮೇಲೆ ನಂಬಿಕೆಯಿಲ್ಲದವರು ಒಟ್ಟಾಗಿ 234 ಸ್ಥಾನಗಳಿಗೆ ನಿಂತುಬಿಟ್ಟರು’ ಎಂದು ಇಂಡಿಯಾ ಮೈತ್ರಿಕೂಟವನ್ನು ಉಲ್ಲೇಖಿಸಿ ನುಡಿದರು. </p>.<p>‘ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಕಾನೂನು ಹೇಗಿದೆ ಎಂಬುದನ್ನು ನೋಡಿ; ರಾಮನ ಪೂಜೆ ಮಾಡಿದವರು ಕ್ರಮೇಣ ಅಹಂಕಾರದತ್ತ ತಿರುಗಿದರು. ಚುನಾವಣೆಯಲ್ಲಿ ಆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸ್ವಂತ ಬಲದಿಂದ ಅಧಿಕಾರ ನಡೆಸಲು ಬೇಕಾದಷ್ಟು ಮತಗಳನ್ನು ದೇವನು ನೀಡಲಿಲ್ಲ. ಅವರ ದುರಹಂಕಾರಿ ಧೋರಣೆಯೇ ಅದಕ್ಕೆ ಕಾರಣ’ ಎಂದರು.</p>.<p>‘ರಾಮನನ್ನು ವಿರೋಧಿಸಿದ ಯಾರಿಗೂ ಅಧಿಕಾರ ಸಿಗಲಿಲ್ಲ. ಅವರು ಪರಸ್ಪರ ಕೈಜೋಡಿಸಿದರೂ, ಎರಡನೇ ಸ್ಥಾನಕ್ಕೆ ಸೀಮಿತಗೊಂಡರು. ದೇವರ ನ್ಯಾಯವು ನೈಜ ಮತ್ತು ಆನಂದದಾಯಕವಾಗಿದೆ’ ಎಂದು ಅಭಿಪ್ರಾಯಪಟ್ಟರು. ‘ಭಗವಾನ್ ರಾಮನು ಯಾರನ್ನೂ ಗೋಳಾಡುವಂತೆ ಮಾಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ನೀಡುತ್ತಾನೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ಲೋಕಸಭಾ ಚುನಾವಣೆ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿ ತೋರಿದ ‘ದುರಹಂಕಾರ’ ಮತ್ತು ಇಂಡಿಯಾ ಮೈತ್ರಿಕೂಟದ ‘ರಾಮ ವಿರೋಧಿ’ ಧೋರಣೆಯನ್ನು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು ಟೀಕಿಸಿದ್ದಾರೆ. </p>.<p>ಜೈಪುರ ಸಮೀಪದ ಕಾನೋತಾದಲ್ಲಿ ಆಯೋಜಿಸಿದ್ದ ‘ರಾಮರಥ ಅಯೋಧ್ಯೆ ಯಾತ್ರಾ ದರ್ಶನ್ ಪೂಜಾ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಸರು ಹೇಳದೆಯೇ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಧೋರಣೆಯನ್ನು ದೂರಿದರು. ಲೋಕಸಭಾ ಚುನಾವಣಾ ಫಲಿತಾಂಶವು ಈ ಪಕ್ಷಗಳ ವರ್ತನೆಯನ್ನು ಪ್ರತಿಬಿಂಬಿಸುತ್ತವೆ ಎಂದರು. </p>.<p>‘ಶ್ರೀರಾಮನ ಮೇಲೆ ಭಕ್ತಿ ತೋರಿದ, ಆದರೆ ‘ದುರಹಂಕಾರಿ’ಯಾದ ಪಕ್ಷವನ್ನು ರಾಮನು 241 ಸ್ಥಾನಗಳಲ್ಲಿ ನಿಲ್ಲಿಸಿದ. ಆ ಪಕ್ಷಕ್ಕೆ ಅತಿಹೆಚ್ಚು ಸ್ಥಾನಗಳು ಸಿಗುವಂತೆ ಮಾಡಿದ’ ಎಂದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದರು.</p>.<p>‘ಆದರೆ, ರಾಮನ ಮೇಲೆ ನಂಬಿಕೆಯಿಲ್ಲದವರು ಒಟ್ಟಾಗಿ 234 ಸ್ಥಾನಗಳಿಗೆ ನಿಂತುಬಿಟ್ಟರು’ ಎಂದು ಇಂಡಿಯಾ ಮೈತ್ರಿಕೂಟವನ್ನು ಉಲ್ಲೇಖಿಸಿ ನುಡಿದರು. </p>.<p>‘ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಕಾನೂನು ಹೇಗಿದೆ ಎಂಬುದನ್ನು ನೋಡಿ; ರಾಮನ ಪೂಜೆ ಮಾಡಿದವರು ಕ್ರಮೇಣ ಅಹಂಕಾರದತ್ತ ತಿರುಗಿದರು. ಚುನಾವಣೆಯಲ್ಲಿ ಆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, ಸ್ವಂತ ಬಲದಿಂದ ಅಧಿಕಾರ ನಡೆಸಲು ಬೇಕಾದಷ್ಟು ಮತಗಳನ್ನು ದೇವನು ನೀಡಲಿಲ್ಲ. ಅವರ ದುರಹಂಕಾರಿ ಧೋರಣೆಯೇ ಅದಕ್ಕೆ ಕಾರಣ’ ಎಂದರು.</p>.<p>‘ರಾಮನನ್ನು ವಿರೋಧಿಸಿದ ಯಾರಿಗೂ ಅಧಿಕಾರ ಸಿಗಲಿಲ್ಲ. ಅವರು ಪರಸ್ಪರ ಕೈಜೋಡಿಸಿದರೂ, ಎರಡನೇ ಸ್ಥಾನಕ್ಕೆ ಸೀಮಿತಗೊಂಡರು. ದೇವರ ನ್ಯಾಯವು ನೈಜ ಮತ್ತು ಆನಂದದಾಯಕವಾಗಿದೆ’ ಎಂದು ಅಭಿಪ್ರಾಯಪಟ್ಟರು. ‘ಭಗವಾನ್ ರಾಮನು ಯಾರನ್ನೂ ಗೋಳಾಡುವಂತೆ ಮಾಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ನೀಡುತ್ತಾನೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>