ಆದರೂ ಸೋಮವಾರ ಜಮ್ಮು ಕಾಶ್ಮೀರದ ತಾವಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರರು ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದರು. ಈಸಮಯದಲ್ಲಿಇಬ್ಬರು ಮೀನುಗಾರರು ನದಿಯ ನಿರ್ಮಾಣ ಹಂತದಲ್ಲಿದ್ದ ಗೋಡೆಯಲ್ಲಿಕುಳಿತು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ನದಿಯ ಮಧ್ಯದಲ್ಲಿ ಇಬ್ಬರೇ ಕುಳಿತಿದ್ದನ್ನು ಗಮನಿಸಿದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಹಗ್ಗದ ಸಹಾಯದಿಂದ ಇಬ್ಬರು ಇದ್ದ ಜಾಗ ತಲುಪಿದ್ದಾರೆ. ನಂತರ ಅವರನ್ನು ಅದೇ ಹಗ್ಗ ಬಳಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.