ಅಮರಾವತಿ (ಮಹಾರಾಷ್ಟ್ರ): ಶಿವಸೇನಾ (ಯುಬಿಟಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ 15 ದಿನದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸೇರಲಿದ್ದಾರೆ ಎಂದು ಅಮರಾವತಿ ಶಾಸಕ ರವಿ ರಾಣಾ ಮಂಗಳವಾರ ಹೇಳಿದ್ದಾರೆ. ಮುಂದೆ ಬರಲಿರುವುದು ಮೋದಿ ಯುಗ ಎಂದು ಅವರು ಪ್ರತಿಪಾದಿಸಿದರು.