<p><strong>ಸಿದ್ಧಾರ್ಥನಗರ</strong>: ಮುಸ್ಲಿಂ ಶಾಸಕಿ ಭೇಟಿ ನೀಡಿದ ಬಳಿಕ ದೇವಾಲಯವನ್ನು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.</p><p>ದುಮಾರಿಯಾ ಗಂಜ್ನ ಸಮಾಜವಾದಿ ಪಕ್ಷದ ಶಾಸಕಿ ಸಯೀದಾ ಖಾತೂನ್ ಅವರು, ಸ್ಥಳೀಯರ ಆಹ್ವಾನ ಮೇರೆಗೆ ಭಾನುವಾರ ಸಮಯ್ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಶತ್ಚಂಡಿ ಮಹಾಯಜ್ಞದಲ್ಲಿ ಭಾಗವಹಿಸಿದ್ದರು.</p><p> ಶಾಸಕಿ ದೇಗುಲದಿಂದ ತೆರಳಿದ ಸ್ವಲ್ಪ ಸಮಯದಲ್ಲೇ ಕೆಲವರು ಗಂಗಾಜಲ ಸಿಂಪಡಿಸಿ ದೇಗುಲದ ಆವರಣವನ್ನು ಶುದ್ಧೀಕರಿಸಿ, ಮಂತ್ರ ಪಠಣ ಮಾಡಿದ್ದಾರೆ.</p><p>ದೇವಸ್ಥಾನ ಇರುವ ಬಧಾನಿ ಚಾಫಾದ ನಗರ ಪಂಚಾಯತ್ ಮುಖ್ಯಾಧಿಕಾರಿ ಧರ್ಮರಾಜ್ ವರ್ಮಾ ಶುದ್ಧೀಕರಣದ ನೇತೃತ್ವ ವಹಿಸಿದ್ದರು. ಶಾಸಕರನ್ನು ಕೆಲವು ಅನೀತಿವಂತ ಜನರು ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಶಾಸಕಿ ಸಯೀದಾ ಖಾತೂನ್ ಮುಸ್ಲಿಮಳಾಗಿದ್ದು, ಹಸುವಿನ ಮಾಂಸ ತಿನ್ನುತ್ತಾರೆ. ಅವರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಸ್ಥಳ ಅಶುದ್ಧವಾಗಿತ್ತು ಎಂದ ಅವರು, ಈಗ ಸಂಪೂರ್ಣ ಪರಿಶುದ್ಧಗೊಳಿಸಲಾಗಿದ್ದು ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.</p><p>‘ನನ್ನ ಜೊತೆಗಿರುವ ಹಲವು ಬ್ರಾಹ್ಮಣರು ಮತ್ತು ಸ್ವಾಮೀಜಿಗಳು ಸಮಯ್ ಮಾತಾ ದೇಗುಲಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನಾನು ದೇವಸ್ಥಾನಕ್ಕೆ ಹೋಗಿದ್ದೆ. ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಈ ಪ್ರದೇಶದ ಎಲ್ಲ ಜನರಿಗೂ ನಾನು ಶಾಸಕಿ, ಎಲ್ಲಿಗೆ ಕರೆದರೂ ಹೋಗುತ್ತೇನೆ’ಎಂದು ಖತೂನ್ ಹೇಳಿದ್ದಾರೆ.</p><p>ಶಾಸಕಿಯನ್ನು ಮಹಾಯಜ್ಞದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಅದರಂತೆ ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಪುರೋಹಿತ ಶ್ರೀ ಕೃಷ್ಣ ದತ್ತ ಶುಕ್ಲಾ ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ಧಾರ್ಥನಗರ</strong>: ಮುಸ್ಲಿಂ ಶಾಸಕಿ ಭೇಟಿ ನೀಡಿದ ಬಳಿಕ ದೇವಾಲಯವನ್ನು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.</p><p>ದುಮಾರಿಯಾ ಗಂಜ್ನ ಸಮಾಜವಾದಿ ಪಕ್ಷದ ಶಾಸಕಿ ಸಯೀದಾ ಖಾತೂನ್ ಅವರು, ಸ್ಥಳೀಯರ ಆಹ್ವಾನ ಮೇರೆಗೆ ಭಾನುವಾರ ಸಮಯ್ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಶತ್ಚಂಡಿ ಮಹಾಯಜ್ಞದಲ್ಲಿ ಭಾಗವಹಿಸಿದ್ದರು.</p><p> ಶಾಸಕಿ ದೇಗುಲದಿಂದ ತೆರಳಿದ ಸ್ವಲ್ಪ ಸಮಯದಲ್ಲೇ ಕೆಲವರು ಗಂಗಾಜಲ ಸಿಂಪಡಿಸಿ ದೇಗುಲದ ಆವರಣವನ್ನು ಶುದ್ಧೀಕರಿಸಿ, ಮಂತ್ರ ಪಠಣ ಮಾಡಿದ್ದಾರೆ.</p><p>ದೇವಸ್ಥಾನ ಇರುವ ಬಧಾನಿ ಚಾಫಾದ ನಗರ ಪಂಚಾಯತ್ ಮುಖ್ಯಾಧಿಕಾರಿ ಧರ್ಮರಾಜ್ ವರ್ಮಾ ಶುದ್ಧೀಕರಣದ ನೇತೃತ್ವ ವಹಿಸಿದ್ದರು. ಶಾಸಕರನ್ನು ಕೆಲವು ಅನೀತಿವಂತ ಜನರು ಆಹ್ವಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಶಾಸಕಿ ಸಯೀದಾ ಖಾತೂನ್ ಮುಸ್ಲಿಮಳಾಗಿದ್ದು, ಹಸುವಿನ ಮಾಂಸ ತಿನ್ನುತ್ತಾರೆ. ಅವರು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಸ್ಥಳ ಅಶುದ್ಧವಾಗಿತ್ತು ಎಂದ ಅವರು, ಈಗ ಸಂಪೂರ್ಣ ಪರಿಶುದ್ಧಗೊಳಿಸಲಾಗಿದ್ದು ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.</p><p>‘ನನ್ನ ಜೊತೆಗಿರುವ ಹಲವು ಬ್ರಾಹ್ಮಣರು ಮತ್ತು ಸ್ವಾಮೀಜಿಗಳು ಸಮಯ್ ಮಾತಾ ದೇಗುಲಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನಾನು ದೇವಸ್ಥಾನಕ್ಕೆ ಹೋಗಿದ್ದೆ. ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಈ ಪ್ರದೇಶದ ಎಲ್ಲ ಜನರಿಗೂ ನಾನು ಶಾಸಕಿ, ಎಲ್ಲಿಗೆ ಕರೆದರೂ ಹೋಗುತ್ತೇನೆ’ಎಂದು ಖತೂನ್ ಹೇಳಿದ್ದಾರೆ.</p><p>ಶಾಸಕಿಯನ್ನು ಮಹಾಯಜ್ಞದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಅದರಂತೆ ಅವರು ಇಲ್ಲಿಗೆ ಆಗಮಿಸಿದ್ದರು ಎಂದು ಪುರೋಹಿತ ಶ್ರೀ ಕೃಷ್ಣ ದತ್ತ ಶುಕ್ಲಾ ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>