ಎಐ ಬಳಕೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಪ್ರಮುಖ ಎಂದ ಅವರು, ಇದರ ಅಳವಡಿಕೆಯಿಂದ ಎದುರಾಗಬಹುದಾದ ಸಂಭಾವ್ಯ ದೋಷಗಳು ಮತ್ತು ಪಕ್ಷಪಾತಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಪ್ರಚಲಿತ ಕಾಲಘಟದಲ್ಲಿ ತಂತ್ರಜ್ಞಾನ ಮತ್ತು ಎಐ ಅನಿವಾರ್ಯ ಎಂದು ಅವರು ಹೇಳಿದರು. ಸಿಂಗಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಮತ್ತು ಇತರ ನ್ಯಾಯಮೂರ್ತಿಗಳು, ತಜ್ಞರು ಉಪಸ್ಥಿತರಿದ್ದರು.