‘ಆದರೆ, ಪಕ್ಷದ ಮತ್ತೊಂದು ಗುಂಪಿಗೆ ಇದು ಅಪಥ್ಯವಾಯಿತು. ತಮ್ಮ ನಾಯಕ ಎನ್.ಎಂ.ಜೋಸೆಫ್ ಅವರೇ ಅರಣ್ಯ ಸಚಿವರಾಗಬೇಕು ಎಂದು ಈ ಗುಂಪು ಪಟ್ಟು ಹಿಡಿಯಿತು. ಅಧಿಕಾರ ವಹಿಸಿಕೊಂಡ ತಕ್ಷಣ ಅವರು, ಅರಣ್ಯಗಳಲ್ಲಿ ಮರಗಳನ್ನು ಕಡಿಯುವುದನ್ನು ನಿಷೇಧಿಸಲು ಮುಂದಾದರು. ಇದು ಕೂಡ ಅವರಿಗೆ ಮುಳುವಾಯಿತು’ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಕೆ.ಜಿ.ಪರಮೇಶ್ವರ್ ವಿವರಿಸುತ್ತಾರೆ.