ಪ್ರೀತಿ, ವಿಶ್ವಾಸ, ರಾಷ್ಟ್ರೀಯತಾವಾದವನ್ನು ಒಳಗೊಂಡಿರುವ ಕಾಂಗ್ರೆಸ್ನ ಸಿದ್ಧಾಂತವನ್ನು ಬಿಜೆಪಿ ಮತ್ತು ಆರ್ಎಸ್ಎಸ್ನ ದ್ವೇಷಪೂರ್ಣ, ವಿಭಜಕ ಸಿದ್ಧಾಂತವು ಮರೆಮಾಚಿದೆ. ಕಾಂಗ್ರೆಸ್ ಈ ದೇಶದ ಸಿದ್ಧಾಂತವನ್ನು ಪಾಲಿಸುತ್ತದೆ. ಕಾಂಗ್ರೆಸ್ ತನ್ನ ಸಿದ್ಧಾಂತವನ್ನುಸಮರ್ಪಕವಾಗಿ ಪ್ರಚುರಪಡಿಸದೇ ಇದ್ದದ್ದು ಮತ್ತು ಹಿಂದುತ್ವ ಪಾಲಿಸುವವರು ದೇಶದ ಮಾಧ್ಯಮವನ್ನು ಮತ್ತು ದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಿರುವುದು ಇದಕ್ಕೆ ಕಾರಣವಿರಬಹುದು ಎಂದರು.